ನಾರಾವಿ: ಪ್ರೌಢಶಾಲೆಯಲ್ಲಿ 2025-2026ನೇ ನೂತನ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಸಮಾರಂಭವು ಜೂ. 23ರಂದು ನೆರವೇರಿತು. ಶಾಲಾ ಮುಖ್ಯೊಪಾಧ್ಯಾಯ ಗೋಪಾಲಕೃಷ್ಣ ತುಳುಪುಲೆಯವರೊಂದಿಗೆ ಶಾಲಾ ನಾಯಕಿ ಶ್ರದ್ಧಾ ಹಾಗು ವಿರೋಧ ಪಕ್ಷದ ನಾಯಕ ಕುಮಾರ್ ಅಶ್ವಿತ್ ಗಿಡಕ್ಕೆ ನೀರು ಎರೆಯುವ ಮುಖೇನ ವಿಧ್ಯಾರ್ಥಿ ಸರಕಾರ ಉದ್ಘಾಟನೆಗೊಂದಿತು.

ನಂತರ ಮಂತ್ರಿಗಳು ತಮ್ಮ ಇಲಾಖೆಗಳ ಕಾರ್ಯಯೋಜನೆಯನ್ನು ಮಂಡಿಸಿದರು. ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಸಭಾಧ್ಯಕ್ಷೆ ಸ್ವಾಗತ ಕೋರಿ ಉಪಪ್ರಧಾನಿ ಧನ್ಯವಾದವಿತ್ತರು.