ಶಿಶಿಲ: ಗ್ರಾಮದ ಶಿಶಿಲ ಪೇರಿಕೆ ರಸ್ತೆಯ ಸಂಕೇಶ ಎಂಬಲ್ಲಿ ಜೂ.22ರಂದು ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಹೈ ಟೆನ್ಷನ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯುಂಟಾಗಿತ್ತು.


ತಕ್ಷಣ ಸ್ಪಂದಿಸಿದ ಶೌರ್ಯ ಸ್ವಯಂಸೇವಕ ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ, ಪವರ್ ಮ್ಯಾನ್ ಹಾಗೂ ಕಿರಿಯ ಅಭಿಯಂತರರಿಗೆ ಮಾಹಿತಿ ನೀಡಿ ವಿದ್ಯುತ್ ನಿಲುಗಡೆಗೊಳಿಸಿ ಅವರ ಸಲಹೆಯಂತೆ ಮರವನ್ನು ಹಾಗೂ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಿದರು.

ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ಅಧ್ಯಕ್ಷ ಹರೀಶ್ ಕೆ., ಸಲಹೆಗಾರ ದಯಾನಂದ ಪಿ.ಡಿ., ಸದಸ್ಯರಾದ ನವೀನ, ದಿಶಾಂತ್, ಸ್ಥಳೀಯರಾದ ಪೊಡಿಯ ಹಾಗೂ ಸಂಜೀವ ಸಹಕರಿಸಿದರು.