ಉಜಿರೆ: ಮಾದಕ ದ್ರವ್ಯಗಳಿಗೆ ಬಲಿಯಾಗಿ ದೈಹಿಕ ಚಟುವಟಿಕೆ ಕಡಿಮೆ ಆಗುತ್ತಿರುವ ಹಿನ್ನೆಲೆ ವ್ಯಸನ ಮುಕ್ತ ಭಾರತ ರೂಪಿಸುವ ನಿಟ್ಟಿನಲ್ಲಿ ಉಜಿರೆಯ ವ್ಯಾಯಾಮ್ ಫಿಟ್ನೆಸ್ ಆಂಡ್ ಕ್ರಾಸ್ ಫಿಟ್ ನೇತೃತ್ವದಲ್ಲಿ ಜೂ.29ರಂದು ಉಜಿರೆ ರೈನೋಥಾನ್ 2025 ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸಮಯ ಬೆಳಗ್ಗೆ 7.30ಗೆ ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಆರಂಭವಾಗುವ ರೈನೋಥಾನ್ ಸ್ಪರ್ಧೆ ಉಜಿರೆಯಿಂದ ಧರ್ಮಸ್ಥಳ ರಸ್ತೆಯಿಂದ ಬೆಳಾಲು ಕ್ರಾಸ್, ನಿನ್ನಿಕಲ್ಲು, ಪೆರ್ಲ ರತ್ನ ಮಾನಸ ಆಸ್ಪತ್ರೆ ಯಿಂದ ಸಾಗಿ ಒಟ್ಟು 5ಕಿಮೀ ಓಟದ ಸ್ಪರ್ಧೆ ಇರಲಿದೆ. ಎಂದು ಉಜಿರೆಯ ಮಲ್ಲಿಕಾರ್ಜುನ ಕಾಂಪ್ಲೆಕ್ಸ್ನಲ್ಲಿರುವ ವ್ಯಾಯಾಮ ಜಿಮ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಉಜಿರೆಯ ದಿ ಏಶಿಯನ್ ಪರ್ಲ್ ಕಾಶಿ ಪ್ಯಾಲೇಸ್, ಬೆಳ್ತಂಗಡಿಯ ರೋಟರಿ ಕ್ಲಬ್, ಬೆಂಗಳೂರಿನ ಇಂದಿರಾನಗರದ ರೋಟರಿ ಕ್ಲಬ್, ಬದುಕು ಕಟ್ಟೋಣ ಸೇವಾ ಟ್ರಸ್ಟ್, ಬೆಳ್ತಂಗಡಿ ರಾಜಾ ರಾಂ ಏಜೆನ್ಸೀಸ್, ಉಜಿರೆಯ ಎಸ್ ಡಿ ಎಂ ಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಂಧ್ಯಾ ಫ್ರೆಶ್, ಎಂ ಡಬ್ಲ್ಯು ಬಿ ಗ್ರೂಪ್, ಪುತ್ತೂರಿನ ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಬೆಳ್ತಂಗಡಿ ಪ್ರೆಸ್ ಕ್ಲಬ್, ಮಂಗಳೂರು ಸಿಇಎನ್ ಪೊಲೀಸ್ ಠಾಣೆ ಇವರ ಸಹಯೋಗದಲ್ಲಿ ನಡೆಯಲಿರುವ ರೈನೋಥಾನ್ 2025 ಓಟದ ಸ್ಪರ್ಧೆಗೆ ಈಗಾಗಲೇ 1270 ನೋಂದಾವಣಿ ಆಗಿದ್ದು. ಇನ್ನು ಮುಂದೆ ಯಾವುದೇ ರಿಜಿಸ್ಟ್ರೇಷನ್ ಇರುವುದಿಲ್ಲ. ನೋಂದಾವಣಿ ಮಾಡಿ ಭಾಗವಹಿಸಿ ಕೊನೆಯವರೆಗೆ ಇರುವ ಪ್ರತಿಯೊಬ್ಬರಿಗೂ ಬಹುಮಾನ ವಿತರಿಸಲಾಗುವುದು ಎಂದು ಪತ್ರಿಕಾ ಗೋಷ್ಟಿಯಲ್ಲಿ ರೈನೋಥಾನ್ ಆಯೋಜನ ಸಮಿತಿಯ ಅಧ್ಯಕ್ಷ ರೊ|ಪ್ರವೀಣ್ ಗೋರೆ ಪತ್ರಿಕಾ ಗೋಷ್ಡಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾರಾಥಾನ್ ನಲ್ಲಿ ಭಾಗವಹಿಸುವರಿಗೆ ನೀಡಲಾಗುವ ಜರ್ಸಿ ಬಿಡುಗಡೆ ಮಾಡಲಾಯಿತು. ಸಂಧ್ಯಾ ಫ್ರೆಶ್ ಮಾಲಕ ರಾಜೇಶ್ ಪೈ, ರೋಟರಿ ಕ್ಲಬ್ ಬೆಳ್ತಂಗಡಿಯ ನಿಯೋಜಿತ ಅಧ್ಯಕ್ಷರಾದ ರೊ| ಪ್ರಕಾಶ್ ಪ್ರಭು, ಕಾರ್ಯದರ್ಶಿ ಸಂದೇಶ್ ರಾವ್, ಓಶಿಯನ್ ಪರ್ಲ್ ಮ್ಯಾನೇಜರ್ ಉದಯ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ಸಂಚಾಲಕ ಮೋಹನ್ ಕುಮಾರ್,ರೊ|ಆದರ್ಶ್ ಕಾರಂತ್, ಅನೂಪ್ ಜೈನ್, ರಾಜರಾಮ್ ಏಜೆನ್ಸಿ ರಾಘನೇಶ್, ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಬನ್ನಿ ತಂಡದ ಅಧ್ಯಕ್ಷ ಧನಂಜಯ್ ರಾವ್ ನಿರೂಪಣೆ ಮಾಡಿದರು. ವ್ಯಾಯಾಮ್ ಮಲ್ಟಿ ಜಿಮ್ ಮಾಲಕ ಶಿಶಿರ್ ರಘುಚಂದ್ರ ಧನ್ಯವಾದವಿತ್ತರು.