ನಿಡ್ಲೆ: ಜೂನ್ 22: ಜೆಸಿಐ ಕೊಕ್ಕಡ ಕಪಿಲ ಘಟಕದ ಆಶ್ರಯದಲ್ಲಿ “ಸಿರಿತನದ ಹಾದಿ 2025” ಎಂಬ ಹೆಸರಿನಲ್ಲಿ ಪ್ರಬುದ್ಧ ಹಣಕಾಸು ಜಾಗೃತಿ ತರಬೇತಿ ಕಾರ್ಯಾಗಾರ ಆನಂದ ರೆಸಾರ್ಟ್, ನಿಡ್ಲೆಯಲ್ಲಿ ಜರುಗಿತು. ಸದಸ್ಯರು ಹಾಗೂ ಸಾರ್ವಜನಿಕರಿಗೆ ಹಣಕಾಸು ಉಳಿತಾಯ, ಬುದ್ಧಿವಂತ ಹೂಡಿಕೆ ಹಾಗೂ ಷೇರು ಮಾರುಕಟ್ಟೆಯ ಕುರಿತು ಮೂಲಭೂತ ಜ್ಞಾನ ನೀಡುವ ಉದ್ದೇಶ ಹೊಂದಿದ ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಿದರು. “ಹಣ ಸಂಪಾದನೆ ಎಲ್ಲರಿಗೂ ಸಾಧ್ಯ, ಆದರೆ ಅದನ್ನು ಬದ್ಧತೆಯಿಂದ ಉಳಿತಾಯ ಮಾಡುವುದು ಜಾಣ್ಮೆಯ ಕೆಲಸ” ಎಂಬ ಥೀಮ್ನೊಂದಿಗೆ ನಡೆದ ಈ ತರಬೇತಿಯಲ್ಲಿ ಹಣಕಾಸು ನಿಷ್ಠೆ, ಹೂಡಿಕೆ ಮಾರ್ಗಗಳು, ಷೇರು ಮಾರುಕಟ್ಟೆ ಸಂಭಾವ್ಯತೆ ಮತ್ತು ಆರ್ಥಿಕ ಶಿಸ್ತಿನ ಮಹತ್ವವನ್ನು ವಿವರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ವಲಯ ನಿರ್ದೇಶಕ ಜೆಇಪಿ ಅಜಿತ್ ಕುಮಾರ್ ರೈ. ಉದ್ಘಾಟಕರ ಭಾಷಣದಲ್ಲಿ ಅವರು “ಆರ್ಥಿಕ ಪ್ರಜ್ಞೆ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಬೇಕಾದ ಸಾಮರ್ಥ್ಯವಾಗಬೇಕು” ಎಂದು ಹುರಿದುಂಬಿಸಿದರು.

ತರಬೇತಿಯ ಮುಖ್ಯ ತರಬೇತುದಾರ ನಾಗರಾಜ್ ಜೆ.ಎಸ್. (Stock Market Advisor, ಪುತ್ತೂರು) ಮತ್ತು ಸಹ-ತರಬೇತುದಾರ ಜೆಇಪಿ ಜಸ್ವಂತ್ ಪಿರೇರಾ (Investment Consultant, ಕೊಕ್ಕಡ) ಮಾಹಿತಿ ಸಮೃದ್ಧ ಉಪನ್ಯಾಸ ನೀಡಿದರು. ಜೆ.ಸಿ ಪ್ರಿಯಾ, ಜೆ. ಅಮೀನ್ ಉದ್ಘಾಟಕರ ಪರಿಚಯ ವಾಚಿಸಿದರು. ಜೆ.ಸಿ ರಿತೇಶ್ ಪ್ರಸ್ತಾವಿಕ ಮಾತು ನುಡಿದರು. ತರಬೇತುದಾರರ ಪರಿಚಯವನ್ನು ಜೆಜೆಸಿ ಅಧ್ಯಕ್ಷ ಜೆಜೆಸಿ ಶ್ರವಣ, ಸಹತರಬೇತುದಾರರ ಪರಿಚಯವನ್ನು ಜೆ.ಸಿ ಪ್ರಜ್ವಲ್ ಲೋಬೋ ಮಾಡಿದರು. ಮಾರ್ಗದರ್ಶಕರಾದ ಹೆಚ್.ಜಿ.ಎಫ್ ಜೋಸೆಫ್ ಪಿರೇರಾ ಮತ್ತು ಹೆಚ್.ಜಿ.ಎಫ್ ಡೆಸೋಜಾ ತರಬೇತಿ ಕುರಿತು ಅನಿಸಿಕೆ ಹೇಳಿದರು. ಜೆ.ಸಿ ವಿಕ್ಟರ್, ಜೆ.ಸಿ ದೀಪಾ, ಜೆ.ಸಿ ಜೇನಿವ, ಜೆ.ಸಿ ಮನೋರ, ಸುಜಾ, ಶುಭ್ರ ಸವಿನ್, ಮನಸ್ವಿ, ಆದ್ಯ, ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ನಿಕಟಪೂರ್ವ ಅಧ್ಯಕ್ಷ ಜೆ.ಸಿ ಸಂತೋಷ್ ಜೈನ್, ಮಾರ್ಗದರ್ಶಕರಾದ ಹೆಚ್.ಜಿ.ಎಫ್ ಜೋಸೆಫ್ ಪಿರೇರಾ, ಹೆಚ್.ಜಿ.ಎಫ್ ಜೇಸಿಂತಾ ಡೆಸೋಜಾ, ಲೇಡಿ ಜೆಸಿ ಅಧ್ಯಕ್ಷೆ ಜೆ.ಸಿ ರೇಷ್ಮಾ ಡಿ ಅಲ್ಮೇಡಾ, ಯೋಜನಾ ನಿರ್ದೇಶಕರಾದ ಜೆ.ಸಿ ರಿತೇಶ್ ಸ್ಟ್ರೆಲಾ ಮತ್ತು ಜೆ.ಸಿ ಪ್ರಜ್ವಲ್ ಲೋಬೋ, ಪೂರ್ವಧ್ಯಕ್ಷ ಜೆ.ಎಫ್.ಎಮ್ ಶ್ರೀಧರ್ ರಾವ್, ಮಾಧ್ಯಮ ಸಂಯೋಜಕರಾದ ಜೆ.ಸಿ ಅಕ್ಷತ್ ರೈ,
ಜೆ.ಸಿ ಪಿ ಟಿ ಸಬಾಸ್ಟಿನ್, ಜೆ.ಸಿ ಜೋಯೆಲ್ ಪಿರೇರಾ, ಹಾಗೂ ಮಕ್ಕಳ ಜೆಸಿ ಅಧ್ಯಕ್ಷೆ ಜೆ.ಸಿ.ಎಲ್.ಟಿ ದಕ್ಷಾ ಜೈನ್ ಮತ್ತು ಎಲ್ಲಾ ಸದಸ್ಯರು ಮತ್ತು ಎಲ್ಲಾ ಪದಾಧಿಕಾರಿಗಳು ಶ್ರಮಪಟ್ಟು ಕೆಲಸ ಮಾಡಿದರು.
ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಕುಟುಂಬದ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ದೇಶಕ್ಕೆ ಸಾಥ್ ನೀಡಿದರು. ಈ ತರಬೇತಿಯು ಭಾಗವಹಿಸಿದ ಪ್ರತಿಯೊಬ್ಬರಲ್ಲೂ ಆರ್ಥಿಕ ಪ್ರಜ್ಞೆ ಹಾಗೂ ಬುದ್ಧಿವಂತ ಹೂಡಿಕೆಗೆ ಸ್ಪೂರ್ತಿದಾಯಕವಾಯಿತು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷೆ ಹೆಚ್.ಜಿ.ಎಫ್ ಶೋಭಾ ಪಿ. ಸ್ವಾಗತಿದರು. ಜೆ.ಸಿ ವಾಣಿಯನ್ನು ಜೆ.ಸಿ ಆಯುಷ್ ಜೈನ್ ವಾಚಿಸಿ, ಕಾರ್ಯಕ್ರಮವನ್ನು ಕಾರ್ಯದರ್ಶಿ ಚಂದನಾ ಜೈನ್ ವಂದಿಸಿದರು.