ಶಿಬರಾಜೆ ಪರಪ್ಪು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಮಕ್ಕಳಿಗೆ ದಾನಿಗಳಿಂದ ಶಾಲು ಮತ್ತು ತಾಳ ವಿತರಣೆ

0

ಕಳೆಂಜ: ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಪರಪ್ಪು ಶಿಬರಾಜೆಯ ಮಂದಿರದಲ್ಲಿ ಭಜನಾ ತರಬೇತಿ ಪ್ರಾರಂಭವಾಗಿದ್ದು ತರಬೇತಿ ಪಡೆಯುವ ಮಕ್ಕಳಿಗೆ ದಾನಿಗಳಿಂದ ಕೇಸರಿ ಶಾಲು ಮತ್ತು ತಾಳಗಳನ್ನು ನೀಡಲಾಯಿತು. ಕೇಸರಿ ಶಾಲನ್ನು ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮತ್ತು ತಾಳಗಳನ್ನ ಸುಧೀರ್ ಕುಮಾರ್ ಎಂ.ಎಸ್, ಗಣೇಶ ಅರಸಿನಮಕ್ಕಿ, ಪ್ರೀತಮ್ ಧರ್ಮಸ್ಥಳ, ಜೀತೇಂದ್ರ ಜೈನ್ ಪರಪ್ಪು ಹರೀಶ್ ಚಂದ್ರ ಬಲ್ಕಾಜೆ, ಹರೀಶ್ ಕೆ.ಬಿ ಮಂಜುನಾಥ ಹಾರಿತ್ತಕಜೆ, ಗಂಗಾಧರ ಭಂಡಾರಿ ಇವರೆಲ್ಲರ ಸಹಾಯದಿಂದ ಪಡೆಯಲಾಯಿತು.

LEAVE A REPLY

Please enter your comment!
Please enter your name here