ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬೆಳಾಲು ಎಸ್. ಡಿ. ಎಂ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಕೃಷ್ಣಾನಂದ ರಾವ್ ಅವಿರೋದವಾಗಿ ಆಯ್ಕೆ ಆಗಿರುತ್ತಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸ. ಉ. ಪ್ರಾ. ಶಾಲೆ ಬದನಾಜೆಯ ನಿರಂಜನ್, ಕೋಶಾಧಿಕಾರಿಯಾಗಿ ಅಶೋಕ್, ಸರಕಾರಿ ಪ್ರೌಢಶಾಲೆ ಹಳೇಪೇಟೆ ಉಜಿರೆ ಆಯ್ಕೆಯಾಗಿರುತ್ತಾರೆ. ಸಂಘದ ಗೌರವ ಅಧ್ಯಕ್ಷರಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ ಆಯ್ಕೆ ಆಗಿರುತ್ತಾರೆ. ಸಂಘದ ಉಪಾಧ್ಯಕ್ಷರಾಗಿ ವೆಂಕಟೇಶ್ ಭಟ್ ಗುರುವಾಯನಕೆರೆ, ಕೇವನ್ ಅಳದಂಗಡಿ, ಜಂಟಿ ಕಾರ್ಯದರ್ಶಿಯಾಗಿ ಶೀನಪ್ಪ ಗೌಡ ಪುದುವೆಟ್ಟು, ಪ್ರವೀಣ್ ಎನ್.ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಜಿತ್ ಗೇರುಕಟ್ಟೆ ಹಾಗೂ ಶೇಖರ್ ಅಳದಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಗುಣಪಾಲ್ ಎಂ. ಎಸ್. ಮುಂಡಾಜೆ ಹಾಗೂ ಪದ್ಮಶ್ರೀ ಜೈನ್ ಕಾಶಿಪಟ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತ್ರಿಶಲಾ ಜೈನ್ ಕರ್ನೂಡಿ ಲಾಯಿಲ, ಪತ್ರಿಕಾ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಲಾಯಿಲ, ಆಂತರಿಕ ಲೆಕ್ಕ ಪರಿಶೋಧಕರಾಗಿ ವಿಠಲ್ ನಾಯಕ್ ಬದನಾಜೆ ಆಯ್ಕೆ ಆಗಿರುತ್ತಾರೆ.