ನಾರಾವಿ: ಹಿರಿಯರು, ಜ್ಯೋತಿಷಿಗಳು, ವಿದ್ವಾಂಸರಾಗಿದ್ದ ಈಚೆಗೆ ದೈವಾಧೀನರಾಗಿದ್ದ ಅರಸಿಕಟ್ತೆ ನಾರಾಯಣ ಮಯ್ಯರಿಗೆ ಅವರ ಸ್ವಗೃಹದಲ್ಲಿ ಬ್ರಾಹ್ಮಣ ಸಮುದಾಯದವರಿಂದ ನುಡಿ ನಮನ ಕಾರ್ಯಕ್ರಮ ಜರಗಿತು.
ನುಡಿ ಜನಮನದಲ್ಲಿ ಮಾತಾಡಿದ ಶಿಶಿಲ ಬಿ. ಜಯರಾಮ ನೆಲ್ಲಿತ್ತಾಯ, ದಿ. ಮಯ್ಯರು ಹಿತ ಮಿತ ಮಾತುಗಾರಿಕೆಯವರು, ಜಾತಿ ಮತ ನೋಡದೆ ಮನೆಗೆ ಬಂದ ಎಲ್ಲರ ಸಮಸ್ಯೆಗೂ ಪರಿಹಾರ ನೀಡಿ ಆಶೀರ್ವಾದ ಮಾಡುತ್ತಿದ್ದರು. ಅರುವ ಸೀಮೆಗೆ ಅವರೊಂದು ಮಾದರಿ ವ್ಯಕ್ತಿತ್ವ. ಅವರ ಮನೆ ನಿತ್ಯ ಅನ್ನದಾಸೋಹದ ಮನೆಯಾಗಿತ್ತು. ಬಡವರ ಪಾಲಿನ ನಂದಾದೀಪವಾಗಿದ್ದರು ಎಂದು ಗುಣಗಾನ ಮಾಡಿದರು.
ವೇಣೂರು ದೇವಾಲಯದ ಮಾಜಿ ಆಡಳಿತ ಮೊಕ್ತೆಸರರಾದ ಪುರುಷೋತ್ತಮ ರಾವ್ ಮಾತಾಡುತ್ತಾ, ಬ್ರಹ್ಮ ಸಮಾಜದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ಇಡೀ ಸಮಾಜಕ್ಕೆ ಅವರು ಆದರ್ಶ ಪ್ರಾಯ ಎಂದು ನುಡಿದರು.
ಅವರ ನಡೆ ನುಡಿ ನಮಗೆಲ್ಲಾ ದಾರಿ ದೀಪವಾಗಲಿ. ಅವರಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮದಲ್ಲಿ ಕೂಟ ಮಹಾಜಗತ್ತಿನ ಅದ್ಯಕ್ಷ ಶ್ರೀನಿವಾಸ ಹೊಳ್ಲ, ಮಕ್ಕಳಾದ ಶ್ರೀನಿವಾಸ ಮಯ್ಯ, ಸುಬ್ರಹ್ಮಣ್ಯ ಮಯ್ಯ, ವರಮಹಾಲಕ್ಮಿ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಬ್ರಾಹ್ಮಣ ಮುಖಂಡರು ಹಾಜರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.