ಬೆಳ್ತಂಗಡಿ: ಗೆಳೆಯರ ಬಳಗ ಮುಂಡತ್ತೋಡಿ ವತಿಯಿಂದ ಉಜಿರೆಯ ಸ.ಹಿ. ಪ್ರಾ. ಶಾಲೆ ಮುಂಡತ್ತೋಡಿಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜೂ.೧೮ ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಪೆನ್, ಪೆನ್ಸಿಲ್ ಮತ್ತು ಛತ್ರಿ ವಿತರಿಸಲಾಯಿತು ಮತ್ತು 7 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಬದುಕು ಕಟ್ಟೋಣ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ಉಚಿತ ಛತ್ರಿಯನ್ನು ನೀಡಿ ಮಕ್ಕಳನ್ನು ಉzಶಿಸಿ ಮಾತನಾಡಿ ಊರಿನವರ ಸಹಕಾರದೊಂದಿಗೆ ಹಾಗೂ ನಮ್ಮ ಸಾಮರ್ಥ್ಯ ಮತ್ತು ಆರ್ಥಿಕ ನೆರವಿನೊಂದಿಗೆ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸುದ್ದಿ ಬಿಡುಗಡೆ ವಾಹಿನಿಯ ಮುಖ್ಯಸ್ಥ ದಾಮೋದರ್ ದೊಂಡೋಲೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕಾಗಿ ಮಾತ್ರ ಕೇಂದ್ರೀಕರಿಸದೆ ಪಠ್ಯೇತರ ಚಟುವಟಿಕೆಗಳಿಗೆ ಪಾಲ್ಗೊಳ್ಳುವುದು ಅತೀ ಮುಖ್ಯ. ಕೇವಲ ಮೊಬೈಲ್ನಲ್ಲಿ ಆಟಗಳನ್ನಾಡುತ್ತಾ ಕುಳಿತುಕೊಳ್ಳಬಾರದು. ಶಿಕ್ಷಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಉತ್ತಜಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಗೌರವಾಧ್ಯಕ್ಷ ಗಣೇಶ್ ಡಿ. ಪಿ, ಎಸ್ಡಿಎಂಸಿ ಆಧ್ಯಕ್ಷೆ ರೇವತಿ, ಉಪಾಧ್ಯಕ್ಷ ದೇವರಾಜ್ ನೋಂಡೆಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸಿ. ಕೆ. ಚಂದ್ರಕಲಾ, ಮುಖ್ಯೋಪಾಧ್ಯಯಿನಿ ಸೇವಂತಿ, ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಕೋಟ್ಯಾನ್, ಭಜರಂಗ ದಳ ಮುಖಂಡ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.
ಶಿಕ್ಷಕರು ಉಷಾ ಕಾರ್ಯಕ್ರಮ ನಿರೂಪಿಸಿದರು. ಗೆಳೆಯರ ಬಳಗದ ಅಧ್ಯಕ್ಷ ವೆಂಕಪ್ಪ ಸ್ವಾಗತಿಸಿ, ವಂದಿಸಿದರು