ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂ.14ರಂದು ಮುಖ್ಯೋಪಾಧ್ಯಾಯ ಸುರೇಶ ಕೆ., ಚುನಾವಣಾಧಿಕಾರಿ ಶಿಕ್ಷಕ ವಿಶ್ವನಾಥ ಹಾಗೂ ಸಹಶಿಕ್ಷಕರ ಸಹಯೋಗದಿಂದ ನಡೆಯಿತು.
ಅಭ್ಯರ್ಥಿಗಳು ಚುನಾವಣೆಯ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರುಗಳಿಗೆ ಮತ ಚಲಾಯಿಸಿದರು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತದಾನ ನಡೆಯಿತು. ಅಂತಿಮವಾಗಿ ವಿದ್ಯಾರ್ಥಿ ನಾಯಕನಾಗಿ ಪ್ರೇಮ್ ಟಿ.ಎಸ್. ಉಪನಾಯಕನಾಗಿ ಮಹಾರುದ್ರಯ್ಯ, ಉಪೋಪ ನಾಯಕ ತ್ರಶಾಂತ್ ಕೆ.ಆರ್. ಆಯ್ಕೆಯಾಗಿರುತ್ತಾರೆ.