ನಿಡ್ಲೆ: ಸ.ಪ್ರೌ.ಶಾಲೆಗೆ ಸುಂದರ ಭಾರತ ಟ್ರಸ್ಟ್ ನಿಂದ ನೋಟ್ ಬುಕ್ ವಿತರಣೆ

0

ನಿಡ್ಲೆ:ಜೂ. 16ರಂದು ಸುಳ್ಯ ತಾ.ಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂದರ ಭಾರತ ಟ್ರಸ್ಟ್ ಜೆ.ಪಿ.ನಗರ ಬೆಂಗಳೂರು ಕೊಡ ಮಾಡಿದ ನೋಟ್ ಪುಸ್ತಕಗಳನ್ನು ಜಿಲ್ಲೆಯ ಸುಮಾರು 115 ಶಾಲೆಗಳಿಗೆ ವಿತರಿಸಲಾಯಿತು.

ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರ ಸಭಾಧ್ಯಕ್ಷೆ ಶಶಿಕಲಾ, ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥ ಪ್ರತಾಪ್ ಪರಾಶರ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ಉಪಸ್ಥಿತರಿದ್ದರು. ಕೊಳ್ಚಾರು ಶಾಲೆಯ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಿ ಪ್ರೌಢ ಶಾಲೆ ನಿಡ್ಲೆಯ ಪರವಾಗಿ ಶಿಕ್ಷಕರ ಶರತ್ ಕುಮಾರ್ ತುಳುಪುಳೆ ಪುಸ್ತಕಗಳನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here