ನಿಡ್ಲೆ : ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ನಿಡ್ಲೆ ವತಿಯಿಂದ ಬರಂಗಾಯದ ನಾಗವೇಣಿ ಅಮ್ಮ ಸಭಾಭವನದಲ್ಲಿ ಕಲಾವಿದರ ಸನ್ಮಾನ ಮತ್ತು ತಾಳಮದ್ದಳೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಆರಂಭದಲ್ಲಿ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಬಿ. ಭುಜಬಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಲಾವಿದರಾದ ಮಹಾದೇವ ಶೆಂಡೆ, ಶ್ರೀಕಂಠ ದಾಮಲೆ ಅರಸಿನಮಕ್ಕಿ ಮತ್ತು ಪಾಕತಜ್ಞ ಕೃಷ್ಣ ಕುಮಾರ ಕಾಟ್ಲ ಇವರನ್ನು ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣುಮರಾಠೆ, ಮಧುಕರ ರಾವ್ ಮಚ್ಚಳೆ ಮತ್ತು ಕಾರ್ಯಕ್ರಮದ ಆಯೋಜಕ ಪಿ. ವಿ. ಈಶ್ವರ ಪ್ರಸಾದ್ ನಿಡ್ಲೆ ಸನ್ಮಾನಿಸಿದರು.
ಪತ್ರಕರ್ತ ಅನಂತ ಹುದಂಗಜೆ, ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಜರಗಿದ ಕೌಶಿಕ ಪ್ರತಿಜ್ಞೆ ತಾಳಮದ್ದಳೆಯಲ್ಲಿ ಈಶ್ವರ ಪ್ರಸಾದ ಪಿ.ವಿ(ಕೌಶಿಕ)( ಮಹಾದೇವ ಶೆಂಡೆ( ವಶಿಷ್ಠ) ವರದಶಂಕರ ದಾಮ್ಲೆ (ಕಾಲಮುಖ ) ಮಹಾಬಲೇಶ್ವರ ಕಾರ್ತಿಕ್ (ಈಶ್ವರ) ಪಾತ್ರ ನಿರ್ವಹಿಸಿದರು. ಭುವನ ಭಾಗ್ಯ ಪಸಂಗದಲ್ಲಿ ಗಣರಾಜ ಬಡೆಕ್ಕಿಲ, ದಿವಾಕರ ಆಚಾರ್ಯ ಗೇರುಕಟ್ಟೆ, ದಿನೇಶ ಶೆಟ್ಟಿ ಕಾವಳಕಟ್ಟೆ, ರವಿ ಭಟ್ ನೆಲ್ಯಾಡಿ, ಸುಬ್ರಹ್ಮಣ್ಯ ಭಟ್ ಪೆರುವೊಡಿ, ವಿಷ್ಣು ಮರಾಠೆ (ನಾರದ )ಮುಖೇಶ ದೇವಧರ್ (ಕರವೀರ )ಗುಡ್ಡಪ್ಪ ಬಲ್ಯ(ಭರತ) ಭಾಗವಹಿಸಿದ್ದರು. ಭಾಗವತರಾಗಿ ಕಾರ್ತಿಕ್ ತಾಮಣ್ಕರ್, ಶಾಲಿನಿ ಹೆಬ್ಬಾರ್, ಮಹೇಶ್ ಕನ್ಯಾಡಿ ಹಿಮ್ಮೇಳದಲ್ಲಿ ಶಿತಿಕಂಠ ಭಟ್ ಉಜಿರೆ, ಶ್ರೇಯಸ್ ಪಾಳಂದೆ, ಕೌಸ್ತುಭ ಕನ್ಯಾಡಿ ಭಾಗವಹಿಸಿದ್ದರು. ಶಿಕ್ಷಕ ಸುಧೀಂದ್ರ ಬಿ. ಕಾರ್ಯಕ್ರಮ ನಿರೂಪಿಸಿದರು.