ಶಿಬಾಜೆ: ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ರಾಜಾಂಗಣಕ್ಕೆ ಶಾಶ್ವತ ಛಾವಣಿ ನಿರ್ಮಿಸುವ ನಿಟ್ಟಿನಲ್ಲಿ ವಿಜ್ಞಾಪನ ಪತ್ರ ಬಿಡುಗಡೆ

0


ಶಿಬಾಜೆ: 800 ವರ್ಷಗಳ ಇತಿಹಾಸ ಇರುವ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಏರುಗತಿಯಲ್ಲಿದ್ದು, ಬಂದ ಭಕ್ತರು ಬಿಸಿಲು ಮಳೆಯಂತಹ ವಾತಾವರಣದಿಂದ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಒಳಗಿನ ಮತ್ತು ಹೊರಗಿನ ರಾಜಾಂಗಣಕ್ಕೆ ಶಾಶ್ವತ ಛಾವಣಿಯನ್ನು ನಿರ್ಮಿಸಲು ಶಿಬಾಜೆ ಗ್ರಾಮಸ್ಥರು ಮತ್ತು ದೇವಸ್ಥಾನದ ಆಡಳಿತ ಸಮಿತಿ ಸೇರಿ ನಿರ್ಣಯಿಸಿರುತ್ತಾರೆ.

ಇದಕ್ಕೆ ಪೂರಕವಾಗಿ ವಾಸ್ತು ತಜ್ಞರ ಮಾರ್ಗದರ್ಶನವನ್ನು ಪಡೆಯಲಾಗಿದೆ. ಇದರ ವಿಜ್ಞಾಪನೆ ಪತ್ರ ಜೂ.11ರಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಅಧ್ಯಕ್ಷ ಶ್ರೀಧರ್‌ ರಾವ್‌ ಅಜಿರಡ್ಕ ಸದಸ್ಯರಾದ ಸುಂದರ ಮಲೆಕುಡಿಯ, ಶೋಭಾ, ಶೀಲಾ, ಬಾಲಚಂದ್ರ ಶೆಟ್ಟಿಗಾರ್‌, ವಸಂತ ಕೆ., ಸತೀಶ್‌, ಗಂಗಾಧರ ಗೌಡ, ಸುಂದರ ಮಲೆಕುಡಿಯ, ಅರ್ಚಕ ಶ್ರೀಧರ ಉಪಧ್ಯಾಯ, ಊರಿನ ಪ್ರಮುಖರಾದ ಚೆನ್ನಪ್ಪ ಗೌಡ, ಚಿನ್ನಯ ಪೂಜಾರಿ, ರವೀಂದ್ರ, ಯೋಗೀಶ್‌ ಗೌಡ ಬೇಂಗಳ ಉಪಸ್ಥಿತರಿದ್ದರು. ‌

LEAVE A REPLY

Please enter your comment!
Please enter your name here