ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಮತದಾನದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳನ್ನು ಇಲ್ಲಿ ಬಳಸಿ ವಿದ್ಯಾರ್ಥಿಗಳಿಗೆ ಮತದಾನದ ವಿಧಾನಗಳನ್ನು ಪ್ರತ್ಯಕ್ಷವಾಗಿ ತಿಳಿಯಲು ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ನಾಮಪತ್ರವನ್ನು ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಸಲ್ಲಿಸಿದ್ದರು. ಮತದಾನ ಮಾಡಲು ಮತಗಟ್ಟೆಯಲ್ಲಿ ಇ.ವಿ.ಎಂ. ಬಳಸಲಾಗಿತ್ತು. ಶಾಲಾ ನಾಯಕಿಯಾಗಿ ಕ್ಷಮಾ, ಶಾಲಾ ಉಪನಾಯಕರಾಗಿ ಆದರ್ಶ್, ಶಿಕ್ಷಣ ಮಂತ್ರಿಯಾಗಿ ಶ್ರಿವರ್ಚಸ್, ನೀರಾವರಿ ಮಂತ್ರಿಯಾಗಿ ಶ್ರವಣ್, ಶಿಸ್ತಿನ ಮಂತ್ರಿಯಾಗಿ ನಿವೇದ್ಯ, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ತನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ಪೂರ್ವಿಭಟ್, ಕ್ರೀಡಾ ಮಂತ್ರಿಯಾಗಿ ಕಲ್ಪಿತ ಆಯ್ಕೆಯಾದರು.
ಶಾಲಾ ಶಿಕ್ಷಕ ವೃಂದ ಮತಗಟ್ಟೆ ತಯಾರಿ ಇ.ವಿ.ಎಂ ಮತಯಂತ್ರದ ಉಸ್ತುವಾರಿಯನ್ನು ವಹಿಸಿದ್ದರು.ಜಯಭೇರಿ ಚುನಾಯಿತರಾದ ನಾಯಕರುಗಳನ್ನು ಬ್ಯಾಂಡ್ ಸೆಟ್ ನೊಂದಿಗೆ ಶಾಲಾ ಆವರಣದೊಳಗೆ ಕರೆತರಲಾಯಿತು. ಒಟ್ಟಾರೆಯಾಗಿ ಒಂದು ಮಾದರಿ ಮತದಾನ ನಡೆಯಿತು.