ಉಜಿರೆ: ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ “ಒಳಿತಿನೆಡೆಗೆ ಒಟ್ಟು ಸೇರೋಣ-ಮಾದಕ ವ್ಯಸನವನ್ನು ವಿರೋಧಿಸೋಣ” ಎಂಬ ಧ್ಯೇಯ ವಾಕ್ಯದಲ್ಲಿ ಮದರಸ ಮಟ್ಟದಲ್ಲಿ ಮಾದಕ ವ್ಯಸನದ ಜನ ಜಾಗೃತಿ ಸಭೆ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದರಸ ಕುಂಟಿನಿ ಅಧೀನದಲ್ಲಿ ಮೇ.31ರಂದು ಕುಂಟಿನಿ ಜಂಕ್ಷನ್ ನಲ್ಲಿ ಅಲ್ ಬುಖಾರಿ ಮಸ್ಜಿದ್ ಕುಂಟಿನಿ ಅಧ್ಯಕ್ಷ ಸಯ್ಯದ್ ಹುಸೈನ್ ತಂಗಳ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯದ್ ಹುಸೈನ್ ತಂಗಳ್ ದುವಾ ನಡೆಸಿದರು. ಅಲ್ ಬುಖಾರಿ ಮಸ್ಜಿದ್ ಕುಂಟಿನಿ ಖತೀಬ್ ಅಬ್ದುಲ್ ಖಾದರ್ ಹಿಕಮಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಮಾದಕ ವ್ಯಸನವೂ ಮನುಷ್ಯನನ್ನು ಸ್ವತಃ ನಶಿಸುವುದರೊಂದಿಗೆ ಕುಂಟುಂಬಕ್ಕೂ, ಸಮಾಜಕ್ಕೂ ಅಪಾಯಕಾರಿ ಇದನ್ನು ನಾವೆಲ್ಲರೂ ಒಟ್ಟಾಗಿ ವಿರೋಧಿಸೋಣ ಎಂದು ಹೇಳಿದರು. ಕೇಂದ್ರ ಮುಹಿಯುದ್ದೀನ್ ಜುಮಾ ಮಸ್ಜಿದ್ ಮುಖ್ಯ ಗುರು ಮುಹಮ್ಮದ್ ಯಾಸಿರ್ ಫುರ್ಖಾನಿ ಮಾತನಾಡಿ ಮಾದಕ ವ್ಯಸನದ ವಿರುದ್ಧ ಕುಂಟಿನಿಯಲ್ಲಿ ಮೊಳಗಿದ ಜನಜಾಗೃತಿ ಅಭಿಯಾನ ಪ್ರತಿ ಮೊಹಲ್ಲ ಕಮಿಟಿಗಳು ಹಾಗೂ ಸಂಘಟನೆಗಳು ನಡೆಸುವ ಮೂಲಕ ಸಂಘಟಿತವಾಗಿ ಹೋರಾಡೋಣ ಎಂದರು.
ಪೆರ್ಲಂಪಾಡಿ ಹೈಸ್ಕೂಲ್ ಅಧ್ಯಾಪಕರಾದ ರಹೀಂ ಕಕ್ಕಿಂಜೆ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ಉಜಿರೆ ರೇಂಜ್ ಅಧ್ಯಕ್ಷ ಮುಹಮ್ಮದ್ ರಫೀಖ್ ಮದನಿ ಮೂರುಗೋಳಿ ಮಾತನಾಡಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಕತ್ತರ್ ಮುಹಮ್ಮದ್ ಹಾಜಿ, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಬದ್ರಿಯಾ, ಕೋಶಾಧಿಕಾರಿ ಮೊಹಿಯುದ್ದೀನ್ ಕುಕ್,
ಲಾಯಿಲ ಪಂಚಾಯತ್ ಸದಸ್ಯ ಸಲೀಂ ಕುಂಟಿನಿ, ಅತ್ತಾಜೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಆಸಿಫ್ ಅತ್ತಾಜೆ, ಖಾಲಿದ್ ಮುಸ್ಲಿಯಾರ್ ಕುಂಟಿನಿ, ಅಲ್ ಬುಖಾರಿ ಯಂಗ್ ಮೆನ್ಸ್ ರವೂಫ್ ಕುಂಟಿನಿ ಉಪಸ್ಥಿತರಿದ್ದರು. ಕಾರ್ಯಕ್ರಮ ಮುಂಚಿತವಾಗಿ ಮದರಸದ ಮಕ್ಕಳಿಂದ ಜನ ಜಾಗೃತಿ ಸಂದೇಶ ಜಾಥ ಸೈಕಲ್ ನಲ್ಲಿ ನಡೆಯಿತು. ಹಬೀಬ್ ರಹ್ಮಾನ್ ಜೌಹರಿ ಗೋಳಿಯಂಗಡಿ ಮಾದಕದ ಅಪಾಯ ಕ್ರಾಂತಿ ಗೀತೆ ಹಾಡಿದರು.
ಮುಹಿಯುದ್ದೀನ್ ಅರೇಬಿಕ್ ಮದರಸದ ಮುಖ್ಯ ಶಿಕ್ಷಕ ಉಮರುಲ್ ಫಾರೂಕ್ ಸಅದಿ ಪದ್ಮುಂಜ ಸ್ವಾಗತಿಸಿದರು. ಹಸೈನಾರ್ ಉಸ್ತಾದ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.