ಮಡoತ್ಯಾರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆಯು ಜೂ.10ರoದು ವಲಯದ ಅಧ್ಯಕ್ಷೆ ವಸಂತಿ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ಮಡಂತ್ಯಾರು ಮಹಿಳಾ ಮಂಡಲ ಕಟ್ಟಡದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಜಯಂತ್ ಉರ್ಲಾoಡಿ, ಕ್ಷೇತ್ರ ಸಮಿತಿ ಅಧ್ಯಕ್ಷೆ ವೇದಾವತಿ ಜನಾರ್ಧನ್, ಕಾರ್ಯದರ್ಶಿ ನಾಗೇಶ್, ಜಿಲ್ಲಾ ಉಪಾಧ್ಯಕ್ಷೆ ಶಾಂಭವಿ ಪಿ.ಬಂಗೇರ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್ ಉಪಸಿದ್ಧರಿದ್ದರು. 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರಾಧ್ಯಕ್ಷರಾಗಿ ಲಿಂಗಪ್ಪ ಟೈಲರ್ ಪುಂಜಾಲಕಟ್ಟೆ, ಅಧ್ಯಕ್ಷರಾಗಿ ವಸಂತಿ ಲಕ್ಷ್ಮಣ್ ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಸುಮಲತಾ, ಕೋಶಾಧಿಕಾರಿಯಾಗಿ ಸವಿತಾ, ಉಪಾಧ್ಯಕ್ಷರಾಗಿ ಜಾರಪ್ಪ ಟೈಲರ್ ಬಳ್ಳಮoಜ ಹಾಗೂ ಕ್ಷೇತ್ರ ಸಮಿತಿಗೆ ಶಶಿಕಲಾ ಗೋಪಾಲ್ ಪುಂಜಾಲಕಟ್ಟೆ, ಪ್ರಮೀಳಾ ಉಮೇಶ್ ಹಾರಬೆ, ಸಂಗೀತ ಶೆಟ್ಟಿ ಮಡಂತ್ಯಾರು, ಯಶೋಧ ಪೂoಜಾ, ಆಶಾಲತಾರವರನ್ನು ಆಯ್ಕೆ ಮಾಡಲಾಯಿತು.

ಹೊಸ ಸದಸ್ಯರ ಸೇರ್ಪಡೆ ಸದಸ್ಯರ ಐಡಿ ಕಾರ್ಡ್ ನವೀಕರಣ ಹಾಗೂ ಐಡಿ ಕಾರ್ಡ್ ವಿತರಣೆ ಮಾಡಲಾಯಿತು. ಸಂಗೀತ ಶೆಟ್ಟಿ ಸ್ವಾಗತಿಸಿದರು. ಪ್ರಮೀಳಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಸದಸ್ಯರಿಗೆ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಸುಮಲತಾ ಧನ್ಯವಾದ ನೀಡಿದರು.