ನಿಟ್ಟಡೆ ಶಾಖಾ ಅಂಚೆ ಪಾಲಕ ವಿಶ್ವನಾಥ ಎಂ. ಸೇವಾ ನಿವೃತ್ತಿ

0

ವೇಣೂರು: ನಿಟ್ಟಡೆ ಶಾಖಾ ಅಂಚೆ ಕಚೇರಿಯ ಅಂಚೆ ಪಾಲಕ ವಿಶ್ವನಾಥ ಎಂ. ಜೂ. 9ರಂದು ಸೇವಾ ನಿವೃತ್ತಿ ಹೊಂದಿದರು. 1982ರಲ್ಲಿ ನಿಟ್ಟಡೆ ಶಾಖಾ ಅಂಚೆ ಕಚೇರಿಯಲ್ಲಿ ಶಾಖಾ ಅಂಚೆ ಪಾಲಕರಾಗಿ ಕರ್ತವ್ಯ ಪ್ರಾರಂಭಿಸಿದ ಇವರು ಸುಧೀರ್ಘ 42 ವರ್ಷ ಸೇವೆ ಸಲ್ಲಿಸಿದರು. ಸುದ್ದಿ ಬಿಡುಗಡೆ ಪತ್ರಿಕಾ ವಿತರಕರಾಗಿಯೂ ಆಗಿದ್ದ ಇವರು ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರನ್ನಾಡಿಪಲ್ಕೆ ಶ್ರೀ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿಯಾಗಿ, ಕುಕ್ಕಜೊಟ್ಟು ಯಕ್ಷಗಾನ ಸಮಿತಿಯ ಕಾರ್ಯದರ್ಶಿಯಾಗಿ, ಕುಕ್ಕೇಡಿ- ನಿಟ್ಟಡೆ ಬಿಲ್ಲವ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಸರೋಜಿನಿ, ಪುತ್ರರಾದ ಅಶ್ವಿನ್ ಕುಮಾರ್, ಅಭಿನಂದನ್, ಪುತ್ರಿ ಶ್ರೀ ರಕ್ಷಾರೊಂದಿಗೆ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here