ಬೆಳ್ತಂಗಡಿ: ಕಾರ್ಕಳದ ಭಾರತಿ ರಮಣ ಆಚಾರ್ಯರ ಮಾರ್ಗದರ್ಶನದಲ್ಲಿ ರಾಘವೇಂದ್ರ ಮಠದ ಮುಖ್ಯ ಅರ್ಚಕರ ರಾಘವೇಂದ್ರ ಬಾಂಗಿಣ್ಣಾಯರವರ ಪೌರೋಹಿತ್ಯದಲ್ಲಿ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಜೂ.9ರಂದು ಮೂಲ ರಾಮ ಸಹಿತ ಶ್ರೀ ರಾಘವೇಂದ್ರ ಗುರುಗಳ ಮತ್ತು ಆಂಜನೇಯ ಸ್ವಾಮಿಗಳ ಬೃಂದಾವನದ ದೃಢ ಕಲಶ ನೆರವೇರಿಸಲಾಯಿತು.
ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಬ್ರಹ್ಮ ಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಮ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿ ಶ್ರವಣ್ ರಾಜ್, ಟ್ರಸ್ಟಿಗಳಾದ, ಸೋಮೇಗೌಡ, ಪ್ರೊ. ಕೃಷ್ಣಪ್ಪ ಪೂಜಾರಿ, ಸುಜಿತಾ ವಿ. ಬಂಗೇರ, ಸುಶೀಲಾ ಹೆಗಡೆ, ಬಿ.ಎ. ಕುಮಾರ ಹೆಗಡೆ, ಮಂಜುನಾಥ ರೈ, ಹಿರಿಯರಾದ ವಿಠ್ಠಲ್ ಶೆಟ್ಟಿ, ನಿವೃತ್ತ ಎಸ್. ಪಿ. ಮಿತ್ರ ಹೇರಾಜೆ, ಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ ಲಾಯಿಲ, ನಾರಾಯಣ ಮಚ್ಚಿನ, ಲತಾ ಶಿವರಾಮ್, ವಾರಿಜಾ ಸುವರ್ಣ, ಸೌಮ್ಯ ಲಾಯಿಲ, ಶಾಂಭವಿ ಬಂಗೇರ, ಜಯಾನಂದ ಲಾಯಿಲ, ಜಯಪ್ರಕಾಶ್ ಶೆಟ್ಟಿ ಬಂಗಾರು ಹಾಗೂ ನೂರಾರು ಭಕ್ತರು ಹಾಜರಿದ್ದರು.