ಉಜಿರೆ: ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ‘ಸೀಡ್ ಬಾಲ್ ತಯಾರಿ’ ತರಬೇತಿ ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಾಯಿತು.
ಪ್ರಸ್ತುತ ನಗರೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಬೀಜ ಚೆಂಡು ತಯಾರಿಕೆ ಮತ್ತು ಅದರ ಮಹತ್ವ ಹಾಗೂ ಬೀಜ ಚೆಂಡುಗಳ ಅಗತ್ಯತೆ ಮತ್ತು ಅದರ ಅನ್ವಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ವಾಣಿ ಎಂ.ಎ. ಮತ್ತು ಉಪನ್ಯಾಸಕ ಪ್ರದೀಪ್ ಕೆ ಹಾಗೂ ಪ್ರಯೋಗ ಶಾಲಾ ಸಹಾಯಕ ರಾಜೇಶ್ ಉಪಸ್ಥಿತರಿದ್ದರು.