ಕುವೆಟ್ಟು: ಮದ್ದಡ್ಕ ಪೇಟೆಯಲ್ಲಿ ಹೆದ್ದಾರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು ಇದೀಗ ಇದ್ದ ರಿಕ್ಷಾ ನಿಲ್ದಾಣದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುವುದಕ್ಕೆ ಜಾಗ ಗುರುತಿಸಿದ್ದು ಬಸ್ಸು ನಿಲ್ದಾಣಕ್ಕೆ ಬೇರೆ ಜಾಗವನ್ನು ಗುರುತಿಸಿ ರಿಕ್ಷಾ ನಿಲ್ದಾಣಕ್ಕೆ ಅವಕಾಶ ಮಾಡಿ ಕೊಡಿ ಎಂದು ಕುವೆಟ್ಟು ಗ್ರಾಮ ಪಂಚಾಯತ್ ಗೆ ಬೇಡಿಕೆ ನೀಡಿದ್ದರು. ಜೂ. 6ರoದು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಹಾಗೂ ಪoಚಾಯತ್ ಅಧಿಕಾರಿ ರಾಜ್ ಶೇಖರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಹೆದ್ದಾರಿಯ ಕೆಲಸದ ಕಂಟ್ರಾಕ್ಟರ್ ದಾರರ ಸಿಬ್ಬಂದಿಯವರ ಜೊತೆ ಮಾತಾನಾಡಿ ರಿಕ್ಷಾ ನಿಲ್ದಾಣಕ್ಕೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿ ಎoದರು. ಈಗಾಗಲೇ ನಿರ್ಮಿಸಿದ ಚರಂಡಿ ಒಳಗೆ ನೀರು ತುಂಬಿ ಕೊಳೆತ ವಾಸನೆ ಬರುತ್ತಿದ್ದು, ಆಟೋ ಚಾಲಕ ಮಾಲೀಕರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿರವರ ಗಮನಕ್ಕೆ ತಂದರು. ತಕ್ಷಣ ಅದನ್ನು ದುರಸ್ತಿಪಡಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎoದು ಹೇಳಿದರು. ಮದ್ದಡ್ಕ ಆಟೋ ಚಾಲಕ ಮಾಲೀಕರು, ಗ್ರಾಮ ಪಂಚಾಯತ್ ಸದಸ್ಯರು, ಅoಗಡಿ ಮಾಲಿಕರು ಉಪಸ್ಥಿತರಿದ್ದರು.