ಕೊಕ್ಕಡ: ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆಯಾಗಿ ಭ. ಚೈತನ್ಯರವರು 8 ವರ್ಷಗಳ ಕಾಲ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಜೂ.3ರಂದು ಶಾಲಾ ಸಭಾ ಭವನದಲ್ಲಿ ಅವರಿಗೆ ಬೀಳ್ಕೊಡುಗೆ ಹಾಗೂ ಅವರ ಧಾರ್ಮಿಕ ಜೀವನದ ರಜತ ಮಹೋತ್ಸವ ಸಮಾರಂಭವನ್ನು ಏರ್ಪಡಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥನಾ ನೃತ್ಯದೊಂದಿಗೆ ದೇವರ ಕೃಪೆ ಬೇಡಿಕೊಂಡರು. ಸಂತ ಪ್ರಾನ್ಸಿಸ್ ವಿದ್ಯಾಸಂಸ್ಥೆಯ ಟ್ರಸ್ಟ್ ಮ್ಯಾನೇಜರ್ ಬ್ರದರ್ ಡಾ| ಜೊಸೇಫ್ ಚಾರುಪ್ಲಾಕ್ಕಲ್ ಭ. ಚೈತನ್ಯರವರಿಗೆ ಶುಭಕೋರಿ, ನೂತನವಾಗಿ ನೇಮಕಗೊಂಡ ಪ್ರಾಂಶುಪಾಲೆ ಭ. ಪವಿತ್ರಾರವರನ್ನು ಸಾಂಕೇತಿಕವಾಗಿ ಹೂಗುಚ್ಛ ನೀಡಿ ವಿದ್ಯಾಸಂಸ್ಥೆಗೆ ಸ್ವಾಗತಿಸಿದರು. ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಭ. ಚೈತನ್ಯರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂತ ಅಲ್ಫೋನ್ಸಾ ಚರ್ಚ್ ನೆಲ್ಯಾಡಿ ಧರ್ಮಗುರು ಫಾ| ಶಾಜಿ ವೆಟ್ಟನ್ತಡತಿಲ್, ಸಂತ ಜೋನರ ಚರ್ಚ್ ಕೊಕ್ಕಡ ಧರ್ಮಗುರು ಫಾ| ಅನಿಲ್ ಪ್ರಕಾಶ್ ಡಿಸಿಲ್ವಾ, ಶಿಕ್ಷಣ ಇಲಾಖೆಯ ಕೊಕ್ಕಡ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೊ, ಸಿ|ರೆಜಿ ಸೆಬಾಸ್ಟಿಯನ್ , ಬೆಳ್ತಂಗಡಿ ವಲಯ ಮುಖ್ಯಸ್ಥೆ ಎಫ್.ಸಿ.ಸಿ ಸಿ|ಡೈಸಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಸಂಚಾಲಕ ಫಾ| ಜಿಬಿನ್ ಬೋಬಿ ಹಾಗೂ ಫಾ. ಅರುಣ್ ಅಭಿನಂದನೆ ಸಲ್ಲಿಸಿದರು. ಉಪನ್ಯಾಸಕಿ ನಾಗವಲ್ಲಿ ಮತ್ತು ಕಾಲೇಜು ವಿದ್ಯಾರ್ಥಿ ಜಸ್ಟಿನ್, ಭ. ಚೈತನ್ಯರವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶುಭಕೋರಿದರು. ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಾನ್ಸನ್ ಗಲ್ಬಾವೋ, ಪಿ.ಟಿ.ಎ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿವರ್ಗ ಹಾಗೂ ನೆಚ್ಚಿನ ವಿದ್ಯಾರ್ಥಿಗಳು ಉಪಸ್ಥಿತರಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಗಣೇಶ್ ಹೆಬ್ಬಾರ್ ಸ್ವಾಗತಿಸಿದರು. ಶಿಕ್ಷಕಿ ಪ್ರಣೀತಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಶಿಕ್ಷಕಿ ಬಬಿತಾ ಡಿಸೋಜ ಸರ್ವರನ್ನು ವಂದಿಸಿದರು.