ಉಜಿರೆ ನ್ಯಾಚುರೋಪತಿ ಕಾಲೇಜು ವತಿಯಿಂದ “ವಿಶ್ವ ತಂಬಾಕು ರಹಿತ ದಿನಾಚರಣೆ ಜಾಗೃತ ರ್‍ಯಾಲಿ”

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಮೇ.31ರಂದು ವಿಶ್ವ ತಂಬಾಕು ರಹಿತ ದಿನಾಚರಣೆಯ ಜಾಗೃತ ರ್‍ಯಾಲಿಯನ್ನು ನಡೆಸಲಾಯಿತು. ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ರ್‍ಯಾಲಿ ಉದ್ಘಾಟಿಸಿ ಸಮಾಜದಲ್ಲಿ ಯುವ ಜನತೆ ತಂಬಾಕು ಹಾಗೂ ದುಷ್ಟ ಚಟಗಳಿಂದ ಪೀಡಿತರಾಗಿದ್ದು ಅದರ ನಿರ್ಮೂಲನೆಯಾಗಬೇಕು ಹಾಗೂ ಸಮಾಜ ಜಾಗೃತವಾಗಬೇಕೆಂದರು.

ಕಾಲೇಜಿನಿಂದ ಉಜಿರೆಯ ಮುಖ್ಯ ವೃತ್ತದ ತನಕ ಸುಮಾರು 500ಕ್ಕೂ ಮಿಕ್ಕಿ ವೈದ್ಯ ವಿದ್ಯಾರ್ಥಿಗಳೊಂದಿಗೆ ಜಾಗೃತ ರ್‍ಯಾಲಿಯನ್ನು ನಡೆಸಿದರು

ಕಾಲೇಜಿನ ಉಪ ಪ್ರಾಂಶುಪಾಲ ಸುಜಾತ ದಿನೇಶ್ ಹಾಗೂ ಡೀನ್ಗ ಳಾದ ಶಿವಪ್ರಸಾದ್ ಶೆಟ್ಟಿ, ಗೀತಾ ಬಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಹಾಗೂ ಉಪನ್ಯಾಸಕ ಬಂಧುಗಳು, ಸಿಬ್ಬಂದಿ ವರ್ಗದವರು ಮತ್ತು ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದರು. ಮತ್ತು ಬೆಳ್ತಂಗಡಿ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರು, ಸಹಕರಿಸಿದರು.

ಈ ಕಾರ್ಯಕ್ರಮವನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸಂಯೋಜಕ ಧರ್ಮೇಂದ್ರ ಕುಮಾರ್ ದೈಹಿಕ ನಿರ್ದೇಶಕ, ಮೇಘನ ಗೌಡ ಹಾಗೂ ವಿದ್ಯಾರ್ಥಿಗಳು ನಿರ್ವಹಿಸಿದರು.

LEAVE A REPLY

Please enter your comment!
Please enter your name here