ಕೊಯ್ಯೂರು: ಅದೂರುಪೇರಲ್ ಶ್ರೀ ಕೃಷ್ಣ ಭಜನಾ ಮಂಡಳಿಯ ಸದಸ್ಯರು ಇತ್ತೀಚೆಗೆ ಪಾಂಬೇಲು ದೇವರಾಜ ಗೌಡರ ನೂತನ ಮನೆಯ ವಾಸ್ತು ಪೂಜೆಯ ಸಂದರ್ಭದಲ್ಲಿ ಭಜನಾ ಸೇವೆಯನ್ನು ನಡೆಸಿ ಕೊಟ್ಟು ಮರು ದಿವಸ ಗೃಹಪ್ರವೇಶದ ಸಂದರ್ಭದಲ್ಲಿ ಮಧ್ಯಾಹ್ನದ ಭೋಜನವನ್ನು ಬಡಿಸುವ ಜವಾಬ್ದಾರಿಯನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ
ಭಜನಾ ಮಂಡಳಿಯ ಪದಾಧಿಕಾರಿಗಳ ಹಾಗೂ ಸದಸ್ಯರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ದೇವರಾಜ್ ಗೌಡ ಅವರ ಮನೆಯವರು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಸುಮಾರು 24 ಸಾವಿರ ರೂಪಾಯಿ ವೆಚ್ಚದ ಇನ್ವರ್ಟರ್ ಕೊಡುಗೆಯಾಗಿ ನೀಡಿ ಸಹಕರಿಸಿದರು.

ಪಾಂಬೇಲು ದೇವರಾಜ ಗೌಡರ ಮಗ ಡಾ. ಕಾರ್ತಿಕ್, ನಿರೀಕ್ಷಾ, ವಿಹಾನ್, ಕೃಷ್ಣ, ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಕಾಸು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್, ಭಜನಾ ಮಂದಿರದ ಉಪಾಧ್ಯಕ್ಷ ಸುಂದರ ಗೌಡ ಕಜೆಕೋಡಿ, ಕಾರ್ಯದರ್ಶಿ ಓಬಯ್ಯ ನಾಯ್ಕ, ಕೋಶಾಧಿಕಾರಿ ಬಾಲಕೃಷ್ಣ ಸಾಲ್ಯಾನ್, ಲೆಕ್ಕಪರಿಶೋಧಕ ಲಿಂಗಪ್ಪ ಗೌಡ ಬೆರ್ಕೆ, ಹೇಮಂತ ಗೌಡ ದೇಂತ್ಯಾರು ಬೊಟ್ಟು, ಭಜನಾ ಮಂಡಳಿಯ ಅರ್ಚಕ ಹೇಮಂತ ಗೌಡ ನಾಗನೊಡಿ, ಮಾಜಿ ಕಾರ್ಯದರ್ಶಿ ಮನೋಜ್ ಕುಮಾರ್ ಕಜೆ, ಮಾಜಿ ಜೊತೆ ಕಾರ್ಯದರ್ಶಿ ಜಿತೇಶ್ ಸಾಂತ್ಯೂಡಿ, ವಸಂತ ನೇಕಾರ ಮುಂಡೆವು, ರಿತೇಶ್ ಬಜ, ಜನಾರ್ದನ ಉಮಿಯ, ಲತೀಶ ಆದೂರು ಪೇರಾಲ್, ನಿತಿನ್ ದೆಲೋಡಿ, ಕಮಲೇಶ್ ಸುರುಳಿ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.