

ಕೊಯ್ಯೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಜ.25 ರಂದು ನಡೆದಿತ್ತು. ಸಹಕಾರ ಭಾರತಿ 7 ಸ್ಥಾನವನ್ನು ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು 5 ಸ್ಥಾನಗಳನ್ನು ಪಡೆದು ವಿಜಯಿಗಳಾಗಿರುತ್ತಾರೆ. ನ್ಯಾಯಾಲಯದ ಆದೇಶ ಬರುವವರೆಗೆ ಘೋಷಣೆಯನ್ನು ತಡೆಹಿಡಿಯಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಚುನಾವಣಾ ಅಧಿಕಾರಿಯ ಆದೇಶದಂತೆ ಏ.25 ರಂದು ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ರವೀಂದ್ರನಾಥ್ ಪಿ, ಉಪಾಧ್ಯಕ್ಷರಾಗಿ ಪುರುಷೋತ್ತಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಅಶೋಕ್ ಕುಮಾರ್, ಉಜ್ವಲ್ ಕುಮಾರ್ , ದಾಮೋದರ ಗೌಡ, ನವೀನ್ ಕುಮಾರ್, ಪರಮೇಶ್ವರ ಗೌಡ, ಯತೀಶ, ಕುಸುಮಾವತಿ, ಶೋಭಾ, ಕೇಶವ ಪೂಜಾರಿ, ಸಂಜೀವ ಮಲೆಕುಡಿಯ ಆಯ್ಕೆಯಾಗಿರುತ್ತಾರೆ.
ಚುನಾವಣೆ ಅಧಿಕಾರಿಯಾಗಿ ಪ್ರತಿಮಾ ಬಿ ವಿ ಇವರು ಚುನಾವಣೆಯ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿ ಕೊಟ್ಟರು. ವಲಯ ಮೇಲ್ವಿಚಾರಕರಾದ ಸುದರ್ಶನ್ ದ ಕ ಜಿ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಹಾಜರಿದ್ದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತಕೃಷ್ಣ ಭಟ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.