ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾಯನಕೆರೆಯ ಶಶಿರಾಜ್ ಶೆಟ್ಟಿ ಎಸ್. ಐ. ಟಿ ವಿಚಾರಣೆ ಮುಗಿಸಿ ವಾಪಾಸಾಗಿದ್ದಾರೆ.
ಆಂಬ್ಯುಲೆನ್ಸ್ ಹೊಂದಿದ್ದ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಗೆ ವಿಚಾರಣೆಗೆ ಕರೆದಿದ್ದು, 2014ರಿಂದ 2016ರವರೆಗೆ 3 ವರ್ಷ ಆಂಬ್ಯುಲೆನ್ಸ್ ನಲ್ಲಿ ಕೆಲ ಶವಗಳ ಸಾಗಾಟ ನಡೆಸಲಾಗಿರುವ ಕಾರಣಕ್ಕೆ ವಿಚಾರಣೆ ನಡೆಸಲಾಗಿದೆ.
ಪೊಲೀಸರ ಕರೆಯ ನಂತರವೇ ಆಂಬ್ಯುಲೆನ್ಸ್ ಕಳುಹಿಸಿ, ನಿಯಮಾನುಸಾರ ಶವ ಸಾಗಾಟ ನಡೆಸಿದ್ದೇವೆ. ಇದನ್ನು ಎಸ್.ಐ.ಟಿ ಮುಂದೆ ಶಶಿರಾಜ್ ತಿಳಿಸಿರುವುದಾಗಿ ಸುದ್ದಿಗೆ ಹೇಳಿದ್ದಾರೆ.