ಬುರುಡೆ ಪ್ರಕರಣ-ಆಂಬ್ಯುಲೆನ್ಸ್ ಮಾಲಕ ಶಶಿರಾಜ್ ಶೆಟ್ಟಿ ಎಸ್.ಐ.ಟಿ ವಿಚಾರಣೆ ಮುಗಿಸಿ ವಾಪಾಸ್-ಆಂಬ್ಯುಲೆನ್ಸ್ ಹೊಂದಿದ್ದ ಹಿನ್ನಲೆಯಲ್ಲಿ ವಿಚಾರಣೆ

0

ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾಯನಕೆರೆಯ ಶಶಿರಾಜ್ ಶೆಟ್ಟಿ ಎಸ್. ಐ. ಟಿ ವಿಚಾರಣೆ ಮುಗಿಸಿ ವಾಪಾಸಾಗಿದ್ದಾರೆ.

ಆಂಬ್ಯುಲೆನ್ಸ್ ಹೊಂದಿದ್ದ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಗೆ ವಿಚಾರಣೆಗೆ ಕರೆದಿದ್ದು, 2014ರಿಂದ 2016ರವರೆಗೆ 3 ವರ್ಷ ಆಂಬ್ಯುಲೆನ್ಸ್ ನಲ್ಲಿ ಕೆಲ ಶವಗಳ ಸಾಗಾಟ ನಡೆಸಲಾಗಿರುವ ಕಾರಣಕ್ಕೆ ವಿಚಾರಣೆ ನಡೆಸಲಾಗಿದೆ.

ಪೊಲೀಸರ ಕರೆಯ ನಂತರವೇ ಆಂಬ್ಯುಲೆನ್ಸ್ ಕಳುಹಿಸಿ, ನಿಯಮಾನುಸಾರ ಶವ ಸಾಗಾಟ ನಡೆಸಿದ್ದೇವೆ. ಇದನ್ನು ಎಸ್.ಐ.ಟಿ ಮುಂದೆ ಶಶಿರಾಜ್ ತಿಳಿಸಿರುವುದಾಗಿ ಸುದ್ದಿಗೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here