

ಉಜಿರೆ: ಸಾಂತ್ವಾನ ಕೇಂದ್ರ ಮಲ್ ಜಅ ದಲ್ಲಿ ಮಾ. 27ರಂದು ಬೃಹತ್ ಪ್ರಾರ್ಥನಾ ಸಮ್ಮೇಳನದ ಪ್ರಯುಕ್ತ ಇಫ್ತಾರ್ ಕೂಟವು ನಡೆಯಿತು. ಅಸ್ಸಯ್ಯದ್ ಉಜಿರೆ ತಂಙಳ್ ನೇತೃತ್ವ ವಹಿಸಿದ್ದರು.
ಸುಬಹಿ ನಮಾಝ್ ವರೇಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಎಸ್.ಎಂ. ಕೋಯಾ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಅಬ್ಲೋನು ಮದ್ದಡ್ಕ, ಲತೀಫ್ ಹಾಜಿ, ಹಸೈನಾರ್ ಬಿ.ಬಿ.ಎಸ್. ಸಂಶುದ್ದೀನ್ ಜಾರಿಗೆಬೈಲು, ಅಬ್ದುಲ್ ಕರೀಮ್ ಗೇರುಕಟ್ಟೆ, ಅಶ್ರಫ್ ಮಂಡಾಜೆ, ಜಮಾಲುದ್ದೀನ್ ಲತೀಫಿ, ಹಂಝ ಮದನಿ ಹಲವಾರು ಧಾರ್ಮಿಕ ಮುಖಂಡರು, ತಾಲೂಕಿನ ವಿವಿಧ ಸುನ್ನೀ ಸಂಘಟಣೆಗಳ ಪದಾಧಿಕಾರಿಗಳು, ಮಸೀದಿಗಳ ಸಮಿತಿಯವರು ಭಾಗವಹಿಸಿದ್ದರು.