ಬೆಳ್ತಂಗಡಿ: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರದ ದೇಯಿ ಬೈದ್ಯೆತಿ ದೇವಿಗೆ ಫೆ.೨೮ರಂದು ಬೆಳ್ಳಿಯ ಕವಚ ಹಾಗೂ ಪ್ರಭಾವಳಿ ಸಮರ್ಪಣೆಗೊಂಡಿತು. ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಅಮೀನ್ ಹಾಗೂ ರೇವತಿ ದಂಪತಿ ಹರಕೆಯ ರೂಪವಾಗಿ ಬೆಳ್ಳಿಯ ಮುಖವಾಡವನ್ನು ಸಮರ್ಪಿಸಿದರು. ಸುರೇಶ್ ಕಾರ್ಕಳ ಪ್ರಭಾವಳಿ ಸಮರ್ಪಿಸಿದರು. ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ ಕೆ.ಬಿ ಉಪಸ್ಥಿತರಿದ್ದರು.