




ಉಜಿರೆ: ಸಿದ್ಧಾವನದ ಬಳಿ ಕಾರುಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ ಘಟನೆ ಜ.1ರಂದು ರಾತ್ರಿ ನಡೆದಿದೆ.


ಉತ್ತರ ಪ್ರದೇಶ ನೊಂದಾವನಿಯ ಕಾರನ್ನು ಹಾಸನ ಮೂಲದ ಯುವಕರು ಮದ್ಯಪಾನ ಸೇವಿಸಿ, 4 ಯುವಕರು ಉಜಿರೆಯಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿರುವ ವೇಳೆ ಸ್ಥಳೀಯ ನಿವಾಸಿಗಳ ಕಾರು ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಸಿದ್ದಾವನ ಸಮೀಪ ರಸ್ತೆ ಅಪಘಾತ ಸಂಭವಿಸಿದೆ.
ಘಟನೆ ವೇಳೆ ಕಾರುಗಳ ಮುಂಭಾಗಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.









