ಬೆಳ್ತಂಗಡಿ: ಆರಕ್ಷಕ ಠಾಣೆಯಲ್ಲಿ ಅದ್ಧೂರಿ ಆಯುಧ ಪೂಜೆ- ರಂಗೇರಿಸಿದ ಪಿಲಿ ನಲಿಕೆ

0

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅದ್ಧೂರಿಯಾಗಿ ಆಯುಧ ಪೂಜೆ ಅ.11ರಂದು ನಡೆಯಿತು. ಠಾಣೆಯ ಮುಭಾಗದಲ್ಲಿರುವ ಬೈರವ ದೈವಕ್ಕೆ ಪರ್ವ ಸೇವೆ, ಆಯುಧ ಪೂಜೆ, ವಾಹನ ಪೂಜೆ ಹಾಗೂ ದುರ್ಗಾ ದೇವಿಯ ಪೂಜೆ ನೇರವೇರಿತು.

ಆಯುಧ ಪೂಜೆಯ ವೇಳೆ ಪಿಲಿ ನಲಿಕೆ ನೋಡುಗರ ಕಣ್ಣ್ ಮನ ಸೆಳೆಯಿತು. ವಿದ್ಯುತ್ ದೀಪಾಲಂಕಾರದಿಂದ ಠಾಣೆ ಕಂಗೊಳಿಸುತ್ತಿತ್ತು. ಸುಡು ಮದ್ದು ಪ್ರದರ್ಶನ ನಡೆಯಿತು. ಕುತ್ಯಾರು ದೇವಸ್ಥಾನದ ಪುರೋಹಿತರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಎ.ಎಸ್.ಐ ದುರ್ಗಾಪ್ರಸಾದ್ ಮತ್ತು ರೇವತಿ ದಂಪತಿಗಳು ಪೂಜಾ ಕಾರ್ಯಗಳನ್ನು ಮಾಡಿದರು.

ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ರಪುರ್ ಮಠ್, ಸಬ್ ಇನ್‌ಸ್ಪೆಕ್ಟರ್ ಮುರಳೀಧರ್ ನಾಯ್ಕ್ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here