ಸಂತೆಕಟ್ಟೆ: ಕೀರ್ತಿ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಶಾರದಾ ಓಪ್ಟಿಕಲ್ಸ್ ಸಹ ಸಂಸ್ಥೆ ಶುಭಾರಂಭ

0

ಬೆಳ್ತಂಗಡಿ : ಕಳೆದ 24 ವರ್ಷಗಳಿಂದ ಬೆಳ್ತಂಗಡಿಯಲ್ಲಿ ನಿರಂತರ ಸೇವೆಯನ್ನು ನೀಡುತ್ತಿದ್ದ ಶ್ರೀ ಶಾರದಾ ಒಪ್ಟಿಕಲ್ಸ್ ಇದರ ಮಳಿಗೆಯ ಸಹ ಸಂಸ್ಥೆಯು ಬೆಳ್ತಂಗಡಿ ಸಂತೆಕಟ್ಟೆಯ ಕೀರ್ತಿ ಕಾಂಪ್ಲೆಕ್ಸ್‌ನಲ್ಲಿ ಕನ್ನಡಕ ಸೇವೆಯನ್ನು ನೀಡುತ್ತಿದ್ದ ರಾವ್ ಒಪ್ಪಿಕಲ್ಸ್ ನಲ್ಲಿ ಅ.9ರಂದು ಶುಭಾರಂಭಗೊಂಡಿತು.

ಮಾಲಕರ ಪೋಷಕರು ಮಾರ್ಟಿನ್ ಡಿ’ಸೋಜಾ ಮತ್ತು ಹಿಲ್ಡಾ ಡಿ’ಸೋಜಾ, ಅತ್ತೆ ದುಲ್ಸಿನ್ ಡಿ’ಸೋಜಾ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಪ್ರಧಾನ ಧರ್ಮಗುರು ವಂ. ಫಾ. ವಾಲ್ಟರ್ ಡಿಮೆಲ್ಲೊ, ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂ. ಫಾ. ಅಬೆಲ್ ಲೋಬೊ, ಬೆಳ್ತಂಗಡಿ ಕಿಲರ್ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಹಿಮಾನ್ ಮದನಿ, ಕಟ್ಟಡ ಮಾಲಕರಾದ ಜೋಸೆಫ್ ಟೆಲ್ಲಿಸ್ ಹಾಗೂ ಲಿಡ್ವಿನ್ ಟೆಲ್ಲಿಸ್, ಮಾಲಕರಾದ ವಿಲಿಯಂ ಡಿ’ಸೋಜಾ ಮತ್ತು ಸುನಿತಾ ಡಿ’ಸೋಜಾ ದೀಪ ಬೆಳಗಿಸಿದರು. ಆಗಮಿಸಿದ ಎಲ್ಲ ಗಣ್ಯರು ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಲ್ಸನ್ ಡಿ’ಸೋಜ, ಪ್ರವೀಣ್ ಮೊನಿಸ್, ವಿನ್ಸೆಂಟ್ ಮೊನಿಸ್, ಸುನಿಲ್ ಮೊರಾಸ್, ರೋಬರ್ಟ್ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು. ಹೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ದೃಷ್ಟಿ ಕನ್ನಡಕಗಳ ತಯಾರಿಕೆ, ಕನ್ನಡಕಗಳಿಗೆ ಉಚಿತ ಸೇವೆ, ಪ್ಯಾನ್ಸಿ ಗಾಗಲ್ಸ್ ಗಳ ಮಾರಾಟ, Bausch & Lombo ಕಾಂಟ್ಯಾಕ್ಟ್ ಲೆನ್ಸ್, ಹಳೆ ಕನ್ನಡಕವನ್ನು ವಿಶೇಷ ರಿಯಾಯಿತಿಯಲ್ಲಿ ಮಾರಾಟ, Prime, Essilor, Zeiss, ಕಂಪೆನಿಯ ಲೆನ್ಸ್‌ಗಳಿಗೆ ವಿಶೇಷ ರಿಯಾಯಿತಿ ಇಲ್ಲಿ ಲಭ್ಯವಿದೆ ಎಂದು ಮಾಲಕ ವಿಲಿಯಂ ಡಿ’ಸೋಜಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here