ಪುದುವೆಟ್ಟು: ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರಿಂದ ದಾಳಿ- ಮರಳು ತುಂಬಿದ ಲಾರಿ ವಶ

0

ಧರ್ಮಸ್ಥಳ: ಪುದುವೆಟ್ಟು ಗ್ರಾಮದ ಮಡ್ಯ ಹೊಳೆಯ ಇನ್ನೊಂದು ಬದಿಯಲ್ಲಿರುವ ನಿಡ್ಲೆ ಗ್ರಾಮದ ಕಾಟ್ಲ ಎಂಬಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ದೂರಿನಂತೆ ಅ.4ರಂದು ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಮತ್ತು ತಂಡದ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪುದುವೆಟ್ಟು ಗ್ರಾಮದ ಅಶ್ವತ್ಥ್ ಎಂಬವರಿಗೆ ಸೇರಿದ ಲಾರಿ ಇದಾಗಿದೆ.

ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ನದಿಗೆ ಇಳಿಸಿ ಮರಳು ತೆಗೆದು ತುಂಬಿಸುತ್ತಿದ್ದ ಇಚರ್ ವಾಹನ ವಶ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

LEAVE A REPLY

Please enter your comment!
Please enter your name here