ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ತರಬೇತಿ ಸಮ್ಮೇಳನದಲ್ಲಿ ಸಮಗ್ರ ಪ್ರಶಸ್ತಿ

0

ಬೆಳ್ತಂಗಡಿ: ಜೆಸಿಐ ಭಾರತದ ಇತಿಹಾಸದಲ್ಲಿ ವಲಯ 15 ಹಮ್ಮಿಕೊಂಡ ಪ್ರಪ್ರಥಮ ಉಡುಪಿ ಜೇಸಿ ಶಂಕರಪುರದಲ್ಲಿ ನಡೆದ ತರಬೇತಿ ಸಮ್ಮೇಳನ ದಲ್ಲಿ ಈ ವರುಷ ಶಾಲಾ ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಹಾಗೂ ಘಟಕದಲ್ಲಿ ಹಮ್ಮಿಕೊಂಡ ಹಲವಾರು ತರಬೇತಿ ಕಾರ್ಯಕ್ರಮಗಳು ಹಾಗೂ ವಲಯವು ಮೊದಲ ಬಾರಿಗೆ ಆಯೋಜಿಸಿದ ಶ್ರಾವಣ ತರಬೇತಿ ಸಪ್ತಾಹ ಕಾರ್ಯಕ್ರಮವನ್ನು ನಡೆಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕಕ್ಕೆ ತರಬೇತಿ ಸಮ್ಮೇಳನದಲ್ಲಿ ವಲಯದ ಐದನೇ ಅತ್ಯುತ್ತಮ ಘಟಕ ಪ್ರಶಸ್ತಿಯು ಲಭಿಸಿತು.

ಸಮೇಳನದಲ್ಲಿ ನಡೆದ ಭಾಷಣ ಸ್ಪರ್ಧೆಗಳಲ್ಲಿ ಜೆಸಿ ವಿಭಾಗದಲ್ಲಿ ಘಟಕದ ಉಪಾಧ್ಯಕ್ಷ ಚಂದ್ರಹಾಸ್ ಬಳಂಜ ಪ್ರಥಮ ಸ್ಥಾನವನ್ನು, ಜೆಜೆಸಿ ವಿಭಾಗದಲ್ಲಿ ನೇವಿಲ್ ದ್ವಿತೀಯ ಸ್ಥಾನವನ್ನು, ಬ್ಯಾನರ್ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕವು ಪ್ರಥಮ ಸ್ಥಾನವನ್ನು ಪಡೆಯಿತು.

ರಾಷ್ಟ್ರೀಯ ತರಬೇತಿ ದಿನ, ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್, ನಾಯಕತ್ವ ತರಬೇತಿ ಶಿಬಿರ, ಜೆಸಿಐ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ತರಬೇತಿ ಕಾರ್ಯಕ್ರಮಗಳು, ಜೆಜೆಸಿ ಸಪ್ತಾಹದಲ್ಲಿ ನಡೆಸಿದ ಸ್ಕಿಲ್ ಡೆವಲಪ್ಮೆಂಟ್ ತರಬೇತಿ, ಹೊಸ ಸದಸ್ಯರಿಗೆ ನಡೆಸಿದ ತರಬೇತಿ ವಿಭಾಗಕ್ಕೆ ವಿಶೇಷ ಮನ್ನಣೆಯನ್ನು ಬೆಳ್ತಂಗಡಿ ಘಟಕವು ಪಡೆಯಿತು.

ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ, ಕಾರ್ಯದರ್ಶಿ ಸೌಮ್ಯ ರಾಕೇಶ್, ವಲಯದ ಉಪಾಧ್ಯಕ್ಷರುಗಳು, ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅನುದೀಪ್ ಜೈನ್, ಲೇಡಿ ಜೇಸಿ ಸಂಯೋಜಕಿ ಶ್ರುತಿ ರಂಜಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here