ಅಳದಂಗಡಿ: ಸಾಲುಕಾಯೇರು ಹಾನಿಂಜ ಶ್ರೀ ಮಹಮ್ಮಾಯಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆ

0

ಅಳದಂಗಡಿ: ಸಾಲುಕಾಯೇರು ಹಾನಿಂಜ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ನವರಾತ್ರಿ ಪೂಜೆ ಪೂರ್ವಸಿದ್ಧತೆ ಕುರಿತು ಹಾಗೂ ದೇವಸ್ಥಾನದ ಜೀರ್ಣೋದ್ಧಾರದ ಬಗೆಗಿನ ವಿಶೇಷ ಸಮಾಲೋಚನಾ ಸಭೆಯು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಶ್ರೀ ಸೋಮನಾಥೇಶ್ವರಿ ಭಜನಾ ಮಂದಿರದ ವಠಾರದಲ್ಲಿ ಸೆ.11ರಂದು ಜರುಗಿತು.

ನವರಾತ್ರಿ ಪೂಜಾ ಕಾರ್ಯಕ್ರಮದ ಪೂರ್ವಸಿದ್ಧತೆ, ರೂಪುರೇಷೆಗಳ ಕುರಿತು ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಗತಿ, ಯೋಜಿತ ಗುರಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಉಪಾಧ್ಯಕ್ಷರಾದ ಧರ್ಣಪ್ಪ ಪೂಜಾರಿ ದೋರಿಂಜ, ಜಗದೀಶ್ ರೈ ಪಾಂಡ್ಯೊಟ್ಟು, ಶಶಿಕಾಂತ್ ನಾಯಕ್ ಪಾಲಬೆ, ಪ್ರಧಾನ ಕಾರ್ಯದರ್ಶಿ ಹರೀಶ್ ದೇವಾಡಿಗ, ಜತೆ ಕಾರ್ಯದರ್ಶಿ ಸಂದೀಪ್ ಎಸ್ ನೀರಲ್ಕೆ, ಪದಾಧಿಕಾರಿಗಳು/ಸದಸ್ಯರುಗಳಾದ ಶ್ರೀಧರ ಮಡಿವಾಳ, ಹರೀಶ್ ಆಚಾರ್ಯ ಮಿತ್ತರೋಡಿ, ನಿತಿನ್ ಹೆಗ್ಡೆ ಹಾನಿಂಜ, ಆನಂದ ಪೂಜಾರಿ, ಪ್ರಸಾದ್ ದಾಸ್ ನೀರಲ್ಕೆ, ಸುಂದರ ಆಚಾರ್ಯ ಮಡೆಂಜಿಮಾರು, ಕುಮಾರ್ ನೀರಲ್ಕೆ, ಅಭಿಷೇಕ್ ಎನ್, ಬಾಲಚಂದ್ರ ಮಡಿವಾಳ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here