ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಸಹಾಯಧನ ಹಸ್ತಾಂತರ

0

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ವತಿಯಿಂದ 549 ಸೇವಾ ಯೋಜನೆಯಾಗಿ ಶ್ರೀ ಶಾರದಾ ಅಂದರ ಗೀತ ಗಾಯನ ಕಾಲ ಸಂಘ ಇವರು ವರ್ಷಗಳಿಂದ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈ ಸಂಸ್ಥೆಯಲ್ಲಿ ಒಟ್ಟು 15 ಜನ ಅಂದ ಕಲಾವಿದರಿದ್ದಾರೆ. ಇವರಿಗೆ ಈಗ ಕಾರ್ಯಕ್ರಮವಿಲ್ಲದೆ ಯಾವುದೇ ಸಹಾಯದ ನಿರೀಕ್ಷೆ ಇಲ್ಲದನ್ನ ಅರಿತ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇವರ ವತಿಯಿಂದ 15000 ರೂ. ರಾಜ ಕೇಸರಿ ಸದಸ್ಯರ ಮತ್ತು ದಾನಿಗಳ ಮುಖಾಂತರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಕೋಶಾಧಿಕಾರಿ ಸಂತೋಷ್ ಉಜಿರೆ, ಕ್ರೀಡಾ ಕಾರ್ಯದರ್ಶಿ ಕಿಶನ್ ಲಾಯಿಲಾ, ಸದಸ್ಯ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here