ಉದಯವಾಣಿ ಮಣಿಪಾಲ ಸ್ಥಾನೀಯ ಸಂಪಾದಕ ಅಳದಂಗಡಿ ಕೃಷ್ಣ ಭಟ್‌ರಿಗೆ ಮಾತೃವಿಯೋಗ

0

ಬೆಳ್ತಂಗಡಿ: ಉದಯವಾಣಿ ಮಣಿಪಾಲದ ಸ್ಥಾನೀಯ ಸಂಪಾದಕ ಅಳದಂಗಡಿ ಕೃಷ್ಣ ಭಟ್‌‌ರ ತಾಯಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ, ಕೃಷಿ ತಜ್ಞೆ ಅಳದಂಗಡಿ ನಿವಾಸಿ ಕಮಲಮ್ಮ(80) ಆ.30ರಂದು ಸ್ವಗೃಹದಲ್ಲಿ ನಿಧನರಾದರು.ಮಾವು ಮತ್ತು ಗುಲಾಬಿ ಕಸಿ ಕಟ್ಟುವಿಕೆಗೆ ಹೆಸರಾಗಿದ್ದ ಕಮಲಮ್ಮ, ಮಾವಿನ ತೋಟ ನಿರ್ಮಿಸಿದ್ದರು. ವೈವಿಧ್ಯಮಯ ಕೃಷಿ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಹಲವು ವರ್ಷ ಅಂಗನವಾಡಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here