ತಂದೆ ನಿಧನದ ಐದೇ ದಿನದಲ್ಲಿ ಮಗನೂ ನಿಧನ- ಮುಂಡಾಜೆಯ ಕೂಳೂರು ನಿವಾಸಿ ಅಬೂಬಕ್ಕರ್ ನಿಧನ

0

ಬೆಳ್ತಂಗಡಿ: ವಯೋವೃದ್ದರಾದ ತಂದೆ ನಿಧನರಾದ‌ ಐದನೇ ದಿನಕ್ಕೇ ಮಗನೂ ನಿಧನರಾದ ಘಟನೆ ಮುಂಡಾಜೆ ಗ್ರಾಮದಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಪುತ್ತಾಕ ಅವರು ಮೃತರಾದ ಐದನೇ ದಿನ ಅವರ ಮಗ ಅಬೂಬಕ್ಕರ್ ಕೂಳೂರು (50 ವರ್ಷ) ಅವರು ತೀವ್ರ ಅನಾರೋಗ್ಯಕ್ಕೊಳಗಾಗಿ ಕಳೆದ ನಾಲ್ಕೂವರೆ ತಿಂಗಳಿನಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಇದ್ದ ಅಬೂಬಕ್ಕರ್ ಅವರು ಆ.16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಬೂಬಕ್ಕರ್ ಅವರ ತಂದೆ ಹಿರಿಯ ಮೇಸ್ರ್ರಿಗಳಾಗಿದ್ದ ಪುತ್ತಾಕ ಕೂಳೂರು ಅವರು ಕಳೆದ ಸೋಮವಾರವಷ್ಟೇ ನಿಧನರಾಗಿದ್ದು ಅವರ ಮೂರನೇ ದಿನದ ಕಾರ್ಯಕ್ರಮ ಆ.15ರಂದು ಸಂಜೆಯಷ್ಟೇ ಅವರ ಮನೆಯಲ್ಲಿ ನಡೆದಿತ್ತು.

ಇದೀಗ ಮೃತರಾದ ಅಬೂಬಕ್ಕರ್ ಅವರು ಸಿವಿಲ್ ಗುತ್ತಿಗೆದಾರರಾಗಿದ್ದು ಕಟ್ಟಡ ನಿರ್ಮಾಣ, ಬಾವಿಗೆ ರಿಂಗ್ ಅಳವಡಿಕೆ ಇತ್ಯಾದಿ ಕೆಲಸಗಳಲ್ಲಿ ವಿಶೇಷ ಅನುಭವಿಯಾಗಿದ್ದರು.

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಇದರ ಆಡಳಿತ ಸಮಿತಿ ಸದಸ್ಯರಾಗಿ, ‘ಮಸ್ಲಕ್’ ಮುಂಡಾಜೆ ಇದರ ಸ್ಥಾಪಕರಲ್ಲೋರ್ವರಾಗಿ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.ಮೃತರು ತಾಯಿ, ಸಹೋದರರು,‌ ಪತ್ನಿ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here