ಗೇರುಕಟ್ಟೆ: ಕೊಜಪ್ಪಾಡಿ ಅಂಗನನಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ- ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ್ ರವರು ಕೊಡುಗೆಯಾಗಿ ನೀಡಿದ ಧ್ವಜ ಉದ್ಘಾಟನೆ

0

ಗೇರುಕಟ್ಟೆ: ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಕೇಂದ್ರಕ್ಕೆ ಕಳಿಯ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಾಕರ ಎಂ ಧ್ವಜಸ್ತಂಭ ಕೊಡುಗೆಯಾಗಿ ನೀಡಿದ್ದು, ಇದರ ಧ್ವಜಸ್ತಂಭ ಉದ್ಘಾಟನೆಯನ್ನು ಆನಂದ ಶೆಟ್ಟಿ ಐಸಿರಿ ನೆರವೇರಿಸಿದರು.

ಕಳಿಯ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕ‌ರ್ ಮತ್ತು ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಸುಭಾಷಿಣಿ ಧ್ವಜರೋಹಣ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ, ಕಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಯಶೋಧರ ಶೆಟ್ಟಿ, ವಿಜಯ್ ಕುಮಾರ್, ಅಬ್ದುಲ್ ಕರೀಂ, ಲತೀಫ್ ಹಾಗೂ ಇನ್ನಿತರ ಸದಸ್ಯರು ಸಿಬ್ಬಂದಿ ವರ್ಗ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಗುರುವಾಯನಕೆರೆ ವಲಯದ ಮೇಲ್ವಿಚಾರಕರಾದ ಯಶೋದ, ಮಕ್ಕಳ ಪೋಷಕರು, ಊರ ನಾಗರಿಕರು, ಅಂಗನವಾಡಿ ಕಾರ್ಯಕರ್ತೆ ಪ್ರತಿಭಾ ಶೆಟ್ಟಿ ಹಾಗೂ ಪುಟಾಣಿ ಮಕ್ಕಳು ಉಪಸಿತರಿದ್ದರು.

LEAVE A REPLY

Please enter your comment!
Please enter your name here