ಸರ್ಕಾರಿ ಬಸ್- ಬೈಕ್ ನಡುವೆ ಅಪಘಾತ: ದ್ವಿಚಕ್ರ ವಾಹನ ಸವಾರ ಆಸ್ಪತ್ರೆಗೆ ದಾಖಲು

0

ಉಜಿರೆ: ಕಾಲೇಜು ರಸ್ತೆಯ ಮುಂಭಾಗ ಆ.16 ರಂದು‌ ಬೆಳಗ್ಗೆ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಧರ್ಮಸ್ಥಳದಿಂದ ಮಂಗಳೂರಿನ ಕಡೆ ಪ್ರಯಾಣಿಸುತ್ತಿದ್ದ ಬಸ್ ಹಾಗೂ ಅದೇ ದಿಕ್ಕಿನಿಂದ ಹಿಂದೆಯಿಂದ ಬರುತ್ತಿದ್ದ ದ್ವಿಚಕ್ರ ಸವಾರ ಉಜಿರೆ ಕಾಲೇಜು ಬಳಿ ನಿಲ್ಲಿಸಿ ನಂತರ ಬಸ್ ಮುಂದಕ್ಕೆ ಚಲಿಸುವಾಗ ಬಸ್ ಚಾಲಕ ಹಿಂದೆಯಿಂದ ಬರುತ್ತಿದ್ದ ವಾಹನವನ್ನು ಗಮನಿಸದೆ ಬಲಭಾಗಕ್ಕೆ ತಿರುಗಿಸಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಣ್ಣ ಪುಟ್ಟ ಗಾಯಗಳಾಗಿದ್ದ ದ್ವಿಚಕ್ರ ಸವಾರನನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವಾಹನ ಸವಾರನನ್ನು ಉಜಿರೆಯ ಮಣಿಕ್ಕೆ ನಿವಾಸಿ ಸತೀಸ್ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here