ನೆರಿಯ: ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ನೆರಿಯ: ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.

ಅಧ್ಯಕ್ಷೆ ವಂಸತಿ ಧ್ವಜಾರೋಹಣ ನೇರವೇರಿಸಿ ಕಾರ್ಯಕ್ರಮಕ್ಕೆ ದೀಪಾ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.ಪಂಚಾಯತ್ ಸದಸ್ಯ ಅಶ್ರಷ್ ಬಿ ಮಾತನಾಡಿ ಅಂಕೋಲ, ಕೇರಳದ ವಯನಾಡು ಮತ್ತು ನೆರಿಯ ಗ್ರಾಮದಲ್ಲಿ ನಡೆದ ಮಳೆಯ ದುರಂತದಲ್ಲಿ ಎಲ್ಲರು ಜಾತಿ ಧರ್ಮ ಮರೆತು ಕಾರ್ಯಚರಣೆ ಭಾಗಿಯಾದ ಹಾಗೆ ನಾವು ಒಗಟ್ಟಿನಲ್ಲಿ ಇರಬೇಕು ಸಂವಿಧಾನವನು ಗೌರವಿಸಿಕೊಂಡು ಭಾರತೀಯ ಸಂಸ್ಕೃತಿಯಂತೆ ನಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ಸದಸ್ಯ ಹೋವಯ್ಯ ಗೌಡ ಶುಭಾ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಂಚಾಯಿತ್ ಅಭಿವೃದ್ಧಿ ಅದಿಕಾರಿ ಸುಮ, ಉಪಾಧ್ಯಕ್ಷೆ ಸಜಿತಾ ಸದಸ್ಯರಾದ ಕುಶಲಾ, ವೇದಾವತಿ, ಮಹಮ್ಮದ್ ಪಿ.ದಿನೇಶ್, ರೀನಾ, ರಮೇಶ್ ಕೆ.ಎಸ್, ಮರಿಯಮ್ಮ ಸವಿತಾ, ಪಂ.ಸಿಬ್ಬಂದಿಗಳು, ರಿಕ್ಷಾ, ಮಾಲೀಕರ ಸಂಘದ ಪಧಾದಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಜಿತ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here