ಬೆಳ್ತಂಗಡಿ: ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಬಿ.ಜಿರವರು ಎಸಿಎಫ್ ಆಗಿ ಪದೋನ್ನತಿ

0

ಬೆಳ್ತಂಗಡಿ: ಅರಣ್ಯ ಇಲಾಖೆಯ ಆರ್.ಎಫ್.ಓ ಅಗಿದ್ದ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಆಗಿರುವ ಮೋಹನ್ ಕುಮಾರ್ ಬಿ.ಜಿ ಅವರಿಗೆ ಎಸಿಎಫ್ ಆಗಿ ಆ.7ರಂದು ರಾಜ್ಯ ಸರಕಾರ ಮುಂಬಡ್ತಿ ನೀಡಿ ಬಾಳೆ ಹೊನ್ನೂರು ಉಪವಿಭಾಗ, ಕೊಪ್ಪ ವಿಭಾಗದ ಎ.ಸಿ.ಎಫ್ ಆಗಿ ವರ್ಗಾವಣೆ ಮಾಡಿದೆ.

ಮೋಹನ್ ಕುಮಾರ್.ಬಿ.ಜಿ 2001ರಲ್ಲಿ ಡಿ.ಆರ್.ಎಫ್.ಓ ಆಗಿ ಸೇವೆಗೆ ಸೇರಿದ್ದು, 2011 ರಲ್ಲಿ ಆರ್.ಎಫ್.ಓ ಆಗಿ ಮುಂಬಡ್ತಿ ಹೊಂದಿದ್ದು ಇದೀಗ 2024 ರಲ್ಲಿ ಎಸಿಎಫ್ ಅಗಿ ಮುಂಬಡ್ತಿ ಹೊಂದಿದ್ದಾರೆ.ಇವರು ಶಿವಮೊಗ್ಗ, ಮೂಡಿಗೆರೆ, ಕೊಪ್ಪ, ಪುತ್ತೂರು, ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಕರ್ತವ್ಯದ ವೇಳೆ ಹಲವು ಅಕ್ರಮ ಮರ ಪ್ರಕರಣ, ಕಾಡು ಪ್ರಾಣಿಗಳ ಬೇಟೆ ಪ್ರಕರಣವನ್ನು ಪತ್ತೆ ಹಚ್ಚಿ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here