ತಾಲೂಕಿನ ಖಾಝಿಯಾಗಿ ಅಧಿಕಾರ ಸ್ವೀಕರಿಸುವಂತೆ ಆಹ್ವಾನ ನೀಡುವ ನಿಮಿತ್ತ ಶೈಖುನಾ ಎಪಿ ಉಸ್ತಾದರನ್ನು ಭೇಟಿಯಾದ ಬೆಳ್ತಂಗಡಿ ಸಂಯುಕ್ತ ಜಮಾ‌ಅತ್ ನಾಯಕರು

0

ಬೆಳ್ತಂಗಡಿ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದರು ಬೆಳ್ತಂಗಡಿ ತಾಲೂಕಿನ ಖಾಝಿಯಾಗಿ ಅಧಿಕಾರ ಸ್ವೀಕರಿಸುವಂತೆ ಕೋರಿಕೊಂಡು ಬೆಳ್ತಂಗಡಿ ಸಂಯುಕ್ತ ಜಮಾ‌ಅತ್ ನಾಯಕರು ಉಸ್ತಾದರನ್ನು ಮರ್ಕಝ್‌ ನಾಲೆಡ್ಜ್ ಸಿಟಿಯಲ್ಲಿ ಭೇಟಿಯಾದರು.

ಈ ಸಂಧರ್ಭದಲ್ಲಿ ಸಂಯುಕ್ತ ಜಮಾ‌ಅತ್ ಅಧ್ಯಕ್ಷರಾದ ಇಸ್ಮಾಈಲ್ ಅಲ್ ಹಾದಿ ಮದನಿ ತಂಙಳ್, ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಾಗೂ ಸಹಾಯಕ ಖಾಝಿಯಾಗಿದ್ದ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಕಾರ್ಯಾಧ್ಯಕ್ಷರು, ಅಶ್ರಫ್ ಸಖಾಫಿ ಮೂಡಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಉಪಾಧ್ಯಕ್ಷರು, ಬದ್ರುದ್ದೀನ್ ಪರಪ್ಪು, ಅಬ್ಬಾಸ್ ಬಟ್ಲಡ್ಕ, ಖಾಸಿಮ್ ಪದ್ಮುಂಜೆ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಹ್ಮದ್ ಎ ಕೆ ಎರುಕಡಪು ಇಕ್ಬಾಲ್ ಮಾಚಾರ್, ವಝೀರ್ ಬಂಗಾಡಿ ನಿಯೋಗದಲ್ಲಿದ್ದರು.

LEAVE A REPLY

Please enter your comment!
Please enter your name here