ಉಜಿರೆ: ಆಟೋ ರಿಕ್ಷಾ ಮೇಲೆ ಮರ ಬಿದ್ದು ಕಷ್ಟದಲ್ಲಿರುವ ರತ್ನಾಕರರಿಗೆ ಉಜಿರೆ ಗ್ರಾಮ ಪಂಚಾಯತ್ ನಿಂದ ಆಹಾರ ಸಾಮಗ್ರಿ ಹಸ್ತಾಂತರ

0

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಪೇಟೆ ನಿವಾಸಿ ಆಟೋ ಚಾಲಕ ರತ್ನಾಕರ ಇವರ ಆಟೋದ ಮೇಲೆ ಇತ್ತೀಚೆಗೆ ಮರ ಬಿದ್ದು ಕಷ್ಟದಲ್ಲಿರುವ ಇವರಿಗೆ ಉಜಿರೆ ಗ್ರಾಮ ಪಂಚಾಯತಿನಿಂದ ಒಂದು ತಿಂಗಳ ಆಹಾರ ಸಾಮಗ್ರಿಯನ್ನು ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಸದಸ್ಯರುಗಳಾದ ಕೆ.ಬಾಲಕೃಷ್ಣ ಗೌಡ, ಮಹಮ್ಮದ್ ಶರೀಫ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರ ಮನೆಗೆ ತೆರಳಿ ಸಾಮಗ್ರಿ ನೀಡಿ ಮುಂದಿನ ಜೀವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here