ಮಚ್ಚಿನ: ಮಳೆಯಿಂದ ಗುಡ್ಡ ಕುಸಿದು ಮನೆಗೆ ಹಾನಿಯಾದ ಪ್ರದೇಶಗಳಿಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

0

ಮಚ್ಚಿನ: ಮಚ್ಚಿನ ಗ್ರಾಮದ ಕುಕ್ಕಿಲ ಮನೆಯ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆಯಾಗಿದ್ದ ಅರುಣಾ ಕುಮಾರಿಯವರ ಮನೆ ಬಳಿ ಮತ್ತು ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದಪ್ಪ ಕುಲಾಲ್ ರವರ ಮನೆಗೆ ತೀವ್ರ ಮಳೆಯಿಂದ ಗುಡ್ಡ ಬಿದ್ದು ಹಾನಿಯಾಗಿದ್ದು. ಆ.01ರಂದು ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರಮೋದ್ ಕುಮಾರ್, ಮಾಜಿ ಸದಸ್ಯರಾದ ದಾಮೋದರ ಅಚಾರ್ಯ, ಪ್ರಮುಖರಾದ ಸತೀಶ್ ಕಾರಂದೂರು, ಸುದೀರ್ ಶೆಟ್ಟಿ ಕೊರಬೆಟ್ಟು, ಸದಾಶಿವ ಹೆಗ್ಡೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here