ಬೆಳಾಲು: ಮಾಯ ಕುದುರೆಬೈಲಿನಲ್ಲಿ ಕೆಸರ್ ದ ಲೇಸ್ ಬಲೇ ಗೊಬ್ಬುಗ ಕಾರ್ಯಕ್ರಮ

0

ಬೆಳಾಲು: ಮಾಯದ ನಮನ ಯುವ ಬಾಂದವರ್ ಇದರ ಆಶ್ರಯದಲ್ಲಿ ಕೆಸರ್ ದ ಲೇಸ್ ಬಲೇ ಗೊಬ್ಬುಗ ಕಾರ್ಯಕ್ರಮ ಜು.28ರಂದು ಮಾಯ ಕುದುರೆಬೈಲು ನಲ್ಕೆತ್ಯಾರ್ ಗದ್ದೆಯಲ್ಲಿ ನಡೆಯಿತು.ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಶಿವಕುಮಾರ್ ಬಾರಿತ್ತಾಯ ಪಾರಳ ಉದ್ಘಾಟಿಸಿ ಶುಭ ಕೋರಿದದರು.

ರಂಗ ಕಲಾವಿದ, ಸಿನಿಮಾ ನಿರ್ದೇಶಕ ರಂಗದರಾಜೆ ಲ।ಸುಂದರ್ ರೈ ಮಂದಾರ ವಿಶೇಷ ಆಹ್ವಾನಿತರಾಗಿ ಆಗಮಿಸಿ ಗದ್ದೆಗೆ ಕೋಣಗಳನ್ನು ಇಳಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಮುಖ್ಯ ಅತಿಥಿಗಳಾಗಿ ಮಾಯ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಜ್ಯೋತಿ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ, ವಸಂತ ಆಚಾರ್ಯ ಆಲಡ್ಕ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು, ಜಗದೀಶ್ ಆಚಾರ್ಯ ಕಾವಳಕಟ್ಟೆ, ವಿನ್ಸೆಂಟ್ ಮಾಯ, ಭಾಗವಹಿಸಿದ್ದರು.

ಬಳಿಕ ವಿವಿಧ ಕೆಸರು ಗದ್ದೆ ಆಟೋಟ ಸ್ಪರ್ಧೆಗಳು ನಡೆಯಿತು.ನಮನ ಯುವ ಬಾಂದವೆರ್ ಸದಸ್ಯರುಗಳಾದ ಹರೀಶ್ ಆಚಾರ್ಯ, ಆಶ್ಲೇಶ್ ನಾವಳೆ, ವಿಘ್ನಶ್ ಕುದ್ರಾಲು, ಪ್ರವೀಣ್ ಕೊಯ್ಯೂರು, ರಂಜನ್ ಮಾಯ, ಇತರ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದು ಸಹಕರಿಸಿದರು.

ಪೋಷಿತ್ ಕೊಕ್ಕಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಶಿವಪ್ರಸಾದ್ ಕಪ್ಪೆಹಳ್ಳ ವಂದಿಸಿದರು.

LEAVE A REPLY

Please enter your comment!
Please enter your name here