ನಡ: ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರೀಶ್ ರವರ ಹುಟ್ಟುಹಬ್ಬವನ್ನು ಅನಾರೋಗ್ಯದಿಂದ ಬಳಲುತ್ತಿರುವವರ ಕುಟುಂಬಕ್ಕೆ ಅಕ್ಕಿ, ದವಸಧಾನ್ಯಗಳನ್ನು ನೀಡುವ ಮೂಲಕ ಆಚರಣೆ

0

ಬೆಳ್ತಂಗಡಿ: ನಡ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಹರೀಶ್ ರವರ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಡ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ, ಮನೆಯ ಆಧಾರಸ್ತಂಭವಾಗಿದ್ದ ಶೀನಪ್ಪ ಗೌಡ ಮತ್ತು ಅವರ ಬುದ್ಧಿಮಾಂದ್ಯ ಮಗಳ ಜೊತೆಗೆ ಜೀವನ ಸಾಗಿಸುತ್ತಿರುವ ಕುಟುಂಬದ ಜೊತೆಗೆ ಹರೀಶ್ ತನ್ನ ಹುಟ್ಟುಹಬ್ಬವನ್ನು ಆಚರಿಸಿದರು. ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಈ ಕುಟುಂಬಕ್ಕೆ ಅಕ್ಕಿ, ದವಸಧಾನ್ಯಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತನ್ನ ಗೆಳೆಯರಾದ ದೀಕ್ಷಿತ್,ರಕ್ಷಿತ್, ಜೀತೆಶ್, ಕಿರಣ್, ನಿತಿನ್, ಯತೀಶ್, ಪ್ರಣಿತ್ ಉಪಸ್ಥಿತರಿದ್ದರು.ಈಗಿನ ವಿದ್ಯಾರ್ಥಿ, ಯುವಜನರು ಹುಟ್ಟುಹಬ್ಬವನ್ನು ಮೋಜು, ಮಸ್ತಿನಲ್ಲಿ ಆಚರಣೆ ಮಾಡುವ ಮೂಲಕ ಹಣವನ್ನು ಪೋಲು ಮಾಡುತ್ತಿರುವ ಈ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಣೆ ಇತರರಿಗೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here