



ಕನ್ಯಾಡಿ: ಮಂಗಳೂರಿನಲ್ಲಿ ನೂತನ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಜು.13ರಂದು ಭೇಟಿ ಮಾಡಿ ಅಭಿನಂದಿಸಿ, ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರ ಬಗ್ಗೆ ಕೇಂದ್ರ ಸರ್ಕಾರದ ಗಮನ ನೀಡುವಂತೆ ವಿನಂತಿಸಿ, ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಅವರನ್ನು ಆಮಂತ್ರಿಸಲಾಯಿತು.


ಸೇವಾಭಾರತಿ ಟ್ರಸ್ಟ್ ಅಧ್ಯಕ್ಷ ಸ್ವರ್ಣಗೌರಿ ಮತ್ತು ಫಂಡ್ ರೈಸ್ ಮ್ಯಾನೇಜರ್ ಆದ ಆಶ್ರಿತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









