ಅರಸಿನಮಕ್ಕಿ: ವಲಯ ಮಟ್ಟದ ಪ್ರಗತಿ ಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಸಾಧನಾ ಸಮಾವೇಶದ ಎಸ್.ಕೆ.ಡಿ.ಆರ್.ಡಿ.ಪಿ ಸಿಇಒ ಅನಿಲ್ ಕುಮಾರ್ ರಿಂದ ಉದ್ಘಾಟನೆ

0

ಅರಸಿನಮಕ್ಕಿ: ಶ್ರೀ.ಕ್ಷೇ.ಧ ಗ್ರಾ.ಯೋಜನೆ ಬಿ.ಸಿ ಟ್ರಸ್ಟ್, ಪ್ರ.ಬಂಧು ಜ್ಞಾ. ವಿಕಾಸ ಸ್ವ. ಸಹಾಯ ಸಂಘಗಳ ಮತ್ತು ಶೌರ್ಯ ವಿಪತ್ತು ಅರಸಿನಮಕ್ಕಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಸಾಧನಾ ಸಮಾವೇಶ ಗುಡ್ರಾದಿ ಗುಡ್ರಾ ಮಲ್ಲೇಶ್ವರ ದೇವಳದ ಸಭಾಭಾವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಜಿರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಶಿವರಾಮ ಗೌಡ ವಹಿಸಿದ್ದು. ಉದ್ಘಾಟನೆಯನ್ನು ಮುಖ್ಯ ಕಾರ್ಯನಿರ್ವಾಹನಾಧಿಕಾರಿಯಾದ ಅನಿಲ್ ಕುಮಾರ್ ಎಸ್.ಎಸ್ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ದಾಖಲಾತಿ ಹಸ್ತಾ೦ತರವನ್ನು ಕೈಕುರೆ ಮಂಜುನಾಥ ಗೌಡ ರವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಸುಧೀರ್ ಕುಮಾರ್ ಅಡ್ಕಾಡಿ, ರಾಘವೇಂದ್ರ ನಾಯಕ್ ಬರ್ಗುಳ, ಧರ್ಮರಾಜ್ ಅಡ್ಕಾಡಿ, ತ್ಯಾoಪಣ್ಣ ಶೆಟ್ಟಿಗಾರ್, ಪದ್ಮಯ ಪೂಜಾರಿ ಶಿವಗಿರಿ ಶಿಶಿಲ, ಮಂಜುಳಾ ಕಾರಂತ್ ಹಾಗೂ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರುಗಳಾದ ವನಿತಾ ವಿ ಶೆಟ್ಟಿಗಾರ್, ಶಕುಂತಲಾ, ಕೃಷ್ಣಪ್ಪಗೌಡ,ಶಿವರಾಮ ಗೌಡ, ವಿಠಲ ಅಡಪ, ವೆಂಕಪ್ಪ ನಾಯ್ಕ, ನಳಿನಿ, ಲಲಿತ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಜಯಶ್ರೀ ಬಳಗ ಸ್ವಾಗತವನ್ನು ಮಹೇಶ್ ಶೆಟ್ಟಿಗಾರ್ ಪೆರ್ಲ, ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಣೆಯನ್ನು, ವರದಿಯನ್ನು ವಲಯ ಮೇಲ್ವಿಚಾರಕಿ ಶಶಿಕಲಾ, ಧನ್ಯವಾದವನ್ನು ಶೌರ್ಯ ವಿಪತ್ತು ತಂಡದ ಕುಶಾಲಪ್ಪ ಗೌಡ ಶಿಶಿಲ ನೆರವೇರಿಸಿದರು.

ಸಭೆಯಲ್ಲಿ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರು, ಸೇವಾ ಪ್ರತಿನಿದಿಗಳು, ಅರಸಿನಮಕ್ಕಿ ವಲಯ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here