ಧರ್ಮಸ್ಥಳ: ಇಂಡಿಯನ್ ಬ್ಯಾಂಕ್ ಶಾಖಾ ವಾರ್ಷಿಕೋತ್ಸವ

0

ಧರ್ಮಸ್ಥಳ: ಇಂಡಿಯನ್ ಬ್ಯಾಂಕ್ ಧರ್ಮಸ್ಥಳ ಶಾಖೆಯ ಕನ್ಯಾಡಿಯಲ್ಲಿ 1ನೇ ವರ್ಷದ ವಾರ್ಷಿಕೋತ್ಸವ ಜು.8ರಂದು ಶಾಖಾ ಕಚೇರಿಯಲ್ಲಿ ನಡೆಯಿತು.

ಹಿರಿಯ ಗ್ರಾಹಕ ಸಿ.ಜಿ.ಪ್ರಭಾಕರ್, ಕರ್ನಾಟಕ ರಾಜ್ಯ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ, ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಎನ್.ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವೈಷ್ಣವಿ ಲಾಡ್ಜ್ ಮಾಲಾಕ ಭರತ್ ಕುಮಾರ್, ಈಶಾ ಎಜೇನ್ಸಿ ಮುಖ್ಯಸ್ಥ ಪವನ್ ಶೆಟ್ಟಿ, ಅತ್ರೇಯ ಲಾಡ್ಜ್ ಮಾಲಾಕ ಅರುಣಾ, ಕನ್ಯಾಡಿಯ ವೈದ್ಯ ಡಾ.ರಾಮಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಎನ್. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕ್ಯಾಶಿಯರ್ ಶ್ರೀತಮ್ ಜಿ. ಸಿಬ್ಬಂದಿ ಸೃಜನ್ ಕೆ. ಸಹಕರಿಸಿದರು. ಲತಾ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ವ್ಯಾಪಾರಸ್ಥರು, ಬ್ಯಾಂಕಿನ ಗ್ರಾಹಕರು ಹಾಜರಿದ್ದರು

LEAVE A REPLY

Please enter your comment!
Please enter your name here