ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನ ನೂತನ ನಿರ್ದೇಶಕರಾಗಿ ರೆ.ಫಾ.ಆದರ್ಶ್ ಜೋಸೆಫ್ ಪುತಿಯೇಡತ್ ನೇಮಕ

0

ಬೆಳ್ತಂಗಡಿ: ಧರ್ಮಪ್ರಾಂತ್ಯದ ಸಂಘಟನೆಯಾದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್, ಕೆ.ಎಸ್.ಎಂ.ಸಿ.ಎ ಇದರ ನೂತನ ನಿರ್ದೇಶಕರಾಗಿ ರೆ.ಫಾ.ಆದರ್ಶ್ ಜೋಸೆಫ್ ಪುತಿಯೇಡತ್ ಇವರನ್ನು ಬೆಳ್ತಂಗಡಿ ಧರ್ಮಧ್ಯಕ್ಷ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿ ಇವರು ನೇಮಕ ಮಾಡಿದ್ದಾರೆ.

ಅತ್ಯಂತ ಉತ್ಸಾಹಿ ಸಂಘಟಕ ಆದರ್ಶ್ ಗುರುಗಳು ಕೆ.ಎಸ್.ಎಂ.ಸಿ.ಎ ನಿರ್ದೇಶಕ ಸ್ಥಾನಕ್ಕೆ ಬಂದಿರೋದು ಅತ್ಯಂತ ಖುಷಿ ತಂದಿದೆ ಎಂದು ಸದಸ್ಯರು ಹೇಳಿದರು. ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಗುರುಗಳ ನೇಮಕಾತಿಯನ್ನು ಸ್ವಾಗತ ಮಾಡಿದ್ಧರು, ಇನ್ನಷ್ಟು ಹುಮ್ಮನಸಿನಿಂದ ನಮ್ಮ ಸಮಿತಿ ಕೆಲಸ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.

ಸದ್ಯ ಗುತಿಗಾರು, ನೆಟ್ಟಣ ಧರ್ಮ ಕೇಂದ್ರಗಳ ಧರ್ಮ ಗುರುಗಳಾಗಿ ಸೇವೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here