ನಾವೂರು: ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚರಿಸದಂತೆ ಮರದ ತಡೆಗೋಡೆ ನಿರ್ಮಾಣ

0

ನಾವೂರು: ನಿಷೇಧದ ನಡುವೆಯೂ ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ, ನಡ ಗ್ರಾಮದ ಬಳ್ಳಿತೋಟ- ಬೋಜಾರ- ಮುಡಾಯಿಬೆಟ್ಟು ಸಂಪರ್ಕದ ರಸ್ತೆಯಲ್ಲಿರುವ ಶಿಥಿಲವಾದ ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚರಿಸದಂತೆ ಮರದ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ಕೈಕಂಬ ಸೇತುವೆ ಶಿಥಿಲವಾಗಿದ್ದು, ಸದರಿ ಸೇತುವೆಯಲ್ಲಿ ಘನ ವಾಹನ ಸಂಚಾರ ಮಾಡದಂತೆ ನಿಷೇಧಿಸಿ ನಾವೂರು ಗ್ರಾಮ ಪಂಚಾಯತ್ ಸೇತುವೆ ಬಳಿಕ ಫಲಕ ಅಳವಡಿಸಿತ್ತು. ಆದರೂ ಕೆಲವೊಂದು ಘನ ವಾಹನಗಳು ಸೇತುವೆ ಮೇಲೆ ಸಂಚಾರ ಮಾಡುವ ಬಗ್ಗೆ ಜುಲೈ 8ರಂದು ನಾವೂರು ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದರಿಂದಾಗಿ ಎಚ್ಚೆತ್ತ ಗ್ರಾಮ ಪಂಚಾಯತ್ ಆಡಳಿತ ಇಂದು ಘನ ವಾಹನ ಸಂಚಾರಿಸದಂತೆ ತಡೆಯಲು ಮರದ ತಡೆಗೋಡೆ ನಿರ್ಮಾಣ ಮಾಡಿದೆ. ಜೊತೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here