ಕಿಡಿಗೇಡಿಗಳಿಂದ ಮನೆಗೆ ಕಲ್ಲು ತೂರಾಟ – ಸಿಮೆಂಟ್ ಸೀಟಿನ ಮಾಡಿಗೆ ಹಾನಿ

0

ತೆಕ್ಕಾರು: ಪಿಂಡಿ ಕಲ್ಲು ಸಮೀಪದ ಹೌದ್ರಮಾಕ ಎಂಬವರ ಮನೆಯ ಮೇಲೆ ಜು.6 ರಂದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಲ್ಲು ತೂರಾಟ ನಡೆಸಿ ಸಿಮೆಂಟ್ ಸೀಟಿನ ಮಾಡಿಗೆ ಹಾನಿ ಉಂಟು ಮಾಡಿ ಪರಾರಿಯಾಗಿದ್ದಾರೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯ ತಿಳಿದು ಸೋಶಿಯಲ್ ಡೆಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ತೆಕ್ಕಾರು ಇದರ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಮಳೆಯನ್ನು ನೋಡದೆ ಸಿಮೆಂಟ್ ಸೀಟಿನ ಮಾಡನ್ನು ದುರಸ್ತಿ ಮಾಡಿದರು.

ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿ SDPI ಗ್ರಾಮ ಸಮಿತಿಯ ಅಧ್ಯಕ್ಷ ನಜೀರ್ ಬಜಾರ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here